Advertisement

ಕಾಂಗ್ರೆಸ್ ಪಕ್ಷ ಸ್ವಂತ ಬಲದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ : ಡಿ.ಕೆ.ಶಿವಕುಮಾರ

06:07 PM Aug 28, 2021 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಸ್ವಂತ ಬಲದೊಂದಿಗೆ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.

Advertisement

ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಗೆ ಬಂದಾಗ ಯಾವ ರೀತಿ ಸ್ವಾಗತ ಸಿಕ್ಕಿದೆ?  ಅದು ಪಾಲಿಕೆ ಚುನಾವಣೆಯಲ್ಲಿ ಪ್ರತಿಬಿಂಬಸಲಿದೆ. ಬಿಜೆಪಿ ಮಿಷನ್ 60 ಆದ್ರೂ ಅನ್ನಲಿ, ಬೆಂಗಳೂರಿನಲ್ಲಿ ಮಿಷನ್ 150 ಯಾದ್ರು ಎನ್ನಲಿ. ಆದರೆ ಮೂರು ಪಾಲಿಕೆಯಲ್ಲಿ ನಾವೇ ಆಡಳಿತ ನಡೆಸೋದು ಎಂದರು.

ಮೈಸೂರು ವಿವಿ ಕುಲಪತಿ ಸಂಜೆ ನಂತರ ಕ್ಯಾಂಪಸ್ ನಲ್ಲಿ ಹೆಣ್ಣು ಮಕ್ಕಳು ಎಲ್ಲೂ ಓಡಾಡಬಾರದು ಅಂತಾರೆ. ಆಮೇಲೆ ಆದೇಶ ವಾಪಸ್ಸು ಪಡೆಯುತ್ತಾರೆ. ಹಾಗಾದರೆ ಸರ್ಕಾರ ಯಾಕೆ ಇರಬೇಕು. ವಿಶ್ವ ವಿದ್ಯಾಲಯದಲ್ಲೇ ಈ ರೀತಿ ಆದರೆ ಹೆಂಗೆ‌. ಸರ್ಕಾರ ಕೂಡಲೇ ಕುಲಪತಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಗ್ಯಾಂಗ್ ರೇಪ್ ಕುರಿತು ಸಚಿವ ಉಮೇಶ ಕತ್ತಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಗಳನ್ನು ಕೇಳಿದ್ದೀನಿ. ನಮ್ಮ ಗೃಹ ಮಂತ್ರಿಗಳ ಮೇಲೇಯೇ ಅದ್ಯಾವುದೋ ಕೇಸ್ ಇದೆಯಂತೆ. ಈ ಬಗ್ಗೆ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಇಂತಹ ಗೃಹ ಮಂತ್ರಿಗಳು ಇದ್ದಾಗಲೇ ರಾಜ್ಯದ ಆಡಳಿತ ಬಹಳ ಚೆನ್ನಾಗಿ ನಡೆಯುತ್ತೆ‌ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next