Advertisement

ಮುಂಬಯಿ ರಸ್ತೆ ಹೊಂಡ ಲೆಕ್ಕ ಹಾಕಲು ಕಾಂಗ್ರೆಸ್‌ ಅಭಿಯಾನ

07:23 PM Jul 12, 2018 | Team Udayavani |

ಮುಂಬಯಿ : ಮಹಾ ಮಳೆ ಮತ್ತು ನೆರೆಗೆ ನಲುಗಿರುವ ಮುಂಬಯಿಯಲ್ಲಿನ ರಸ್ತೆ ಹೊಂಡಗಳನ್ನು ಲೆಕ್ಕ ಹಾಕುವ ಪ್ರತಿಭಟನಾ ಅಭಿಯಾನವನ್ನು ಕಾಂಗ್ರೆಸ್‌ ಪಕ್ಷ ಆರಂಭಿಸಿದೆ.

Advertisement

ಮುಂಬಯಿ ಮಹಾ ಮಳೆಗೆ ಮಹಾ ನಗರಿಯ ರಸ್ತೆಗಳು ಸಂಪೂರ್ಣವಾಗಿ ಜರ್ಜರಿತವಾಗಿದ್ದು ಇದಕ್ಕಾಗಿ ಆಳುವ ಬಿಜೆಪಿ ಮತ್ತು ಶಿವಸೇನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ನಿರುಪಮ್‌ ಅವರು “ಬಿಜೆಪಿ ಮತ್ತು ಶಿವಸೇನೆಯವರು ಈಗ ಎಲ್ಲಿಯೂ ಕಾಣುತ್ತಿಲ್ಲ; ಆದರೂ ನಾವು ಮುಂಬಯಿ ಮಹಾನಗರಿಯ ರಸ್ತೆ ಹೊಂಡಗಳನ್ನು ಲೆಕ್ಕ ಹಾಕಿ ಅವುಗಳ ಫೋಟೋವನ್ನು ಬೃಹನ್‌ ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌ಗೆ ಕಳುಹಿಸುವ ಅಭಿಯಾನವನ್ನು ಆರಂಭಿಸಿದ್ದೇವೆ’ ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು “ಮುಂಬಯಿ ಮಹಾ ನಗರದ ರಸ್ತೆ ಹೊಂಡಗಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹವಾಗಿ ಇಳಿದಿದೆ. ರಸ್ತೆ ಹೊಂಡಗಳನ್ನು ಇನ್ನಷ್ಟು ಗಮನಾರ್ಹವಾಗಿ  ಕಡಿಮೆ ಮಾಡುವ ದಿಶೆಯಲ್ಲಿ ನಾವು ಮುಂಬಯಿ ಪೌರಾಡಳಿತೆ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ – ಬಾಂಬೆ (ಐಐಟಿ-ಬಿ) ಜತೆಗೂಡಿ ಕೆಲಸ ಮಾಡುವೆವು’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next