Advertisement

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

01:44 AM May 06, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ನಡೆಸಿದ ರಾಜಕೀಯ ಮಾತುಕತೆ ವೀಡಿಯೋ ಭಾರೀ ವೈರಲ್‌ ಆಗಿದೆ. ರಾಹುಲರ ಬಿಳಿ ಟೀ ಶರ್ಟ್‌ ವಿಚಾರದಿಂದ ಹಿಡಿದು ಹಲವು ಸ್ವಾರಸ್ಯಕರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

Advertisement

ಮೊದಲಿಗೆ, “ಚುನಾವಣೆ ಪ್ರಚಾರದಲ್ಲಿ ಇಷ್ಟವಾಗುವ ಹಂತ ಯಾವುದು’ ಎಂಬ ಪ್ರಶ್ನೆಗೆ ರಾಗಾ, “ಪ್ರಚಾರ ಮುಗಿಯುವ ಹಂತ’ ಎಂದಿದ್ದಾರೆ. ಪಾರದರ್ಶಕತೆ, ಸರಳತೆ ಪ್ರತೀಕವಾಗಿ ಬಿಳಿ ಟೀ-ಶರ್ಟ್‌ ಧರಿಸುವುದಾಗಿಯೂ ಹೇಳಿದ್ದಾರೆ. “ಪ್ರಚಾರದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದೆನಿಸುತ್ತಿದೆ’ ಎಂಬ ರಾಹುಲ್‌ ಪ್ರಶ್ನೆಗೆ ಖರ್ಗೆ, “ಯಾವುದೂ ತಪ್ಪಿಲ್ಲ. ದೇಶ ನಾಶ ಮಾಡುತ್ತಿರುವವರನ್ನು ತಡೆಯಲು ನಡೆಸುತ್ತಿರುವ ಪ್ರಚಾರವಿದು ‘ ಎನ್ನುತ್ತಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ, “ಅಧಿಕಾರ ಮುಖ್ಯವೋ, ಸಿದ್ಧಾಂತವೋ’ ಎಂದು ಕೇಳಲಾಗಿದ್ದು, ಅವರು “ಸಿದ್ಧಾಂತ’ ಎಂದು ಉತ್ತರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next