Advertisement

ಕಾಂಗ್ರೆಸ್‌ಗೆ 136 ಸ್ಥಾನ ಖಚಿತ: ಡಿ.ಕೆ.ಶಿವಕುಮಾರ್‌

12:49 AM Dec 17, 2022 | Team Udayavani |

ಕುಷ್ಟಗಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿಗೆ ವಿಶೇಷ ಆರ್ಥಿಕ ವಲಯ ಸ್ಥಾಪಿಸಲಾಗುವುದು. ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದವರಿಗೆ ಕಡಿಮೆ ದರ ದಲ್ಲಿ ನೀರು, ವಿದ್ಯುತ್‌ ಮೂಲಸೌಕರ್ಯಗಳ ವಿಶೇಷ ಪ್ಯಾಕೇಜ್‌ ಕಲ್ಪಿಸಲಾಗುವುದು. ಆ ಧೈರ್ಯದಿಂದಲೇ ಮಾತನಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಅಮರೇಗೌಡ ಪಾಟೀಲ್‌ ಬಯ್ನಾಪುರ ಅವರ ಜನ್ಮದಿನೋತ್ಸವ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ 136 ಸ್ಥಾನ ಗೆದ್ದು ಅ ಧಿಕಾರಕ್ಕೆ ಬರುವುದು ಬಹುತೇಕ ಖಚಿತ. ಎಲ್ಲರಿಗೂ ಸರಕಾರಿ ನೌಕರಿ ಕೊಡುವ ಭರವಸೆ ನೀಡುವುದಿಲ್ಲ. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಹಿಂದೆ ಇಂಧನ ಸಚಿವನಾಗಿದ್ದ ವೇಳೆ ಲೈನ್‌ಮೆನ್‌ ಹುದ್ದೆಗಳನ್ನು ಯಾರಿಗೂ ಲಂಚ ಇಲ್ಲದೇ ಭರ್ತಿ ಮಾಡಲಾಗಿತ್ತು ಎಂದರು.

ಬಿಜೆಪಿ ಸರಕಾರದಲ್ಲಿ ಪಿಎಸ್‌ಐ ಹುದ್ದೆಗೆ ಲಂಚ ತೆಗೆದುಕೊಂಡ ಐಎಎಸ್‌, ಐಪಿಎಸ್‌ ಅ ಧಿಕಾರಿ ಸಹಿತ ಈ ಪ್ರಕರಣದಲ್ಲಿ ಶಾಮೀಲಾದವರು ಕೋರ್ಟ್‌ನಲ್ಲಿ ಮಾತನಾಡುವುದಕ್ಕೂ ಅವಕಾಶ ನೀಡದೆ ಜೈಲಿಗೆ ಹೋಗಿ ಕೊಳೆಯಬೇಕಾಯಿತು. ಶಿಕ್ಷಕರ ಹಾಗೂ ಗುಮಾಸ್ತ ಹುದ್ದೆ ಕೂಡ ಲಂಚವಿಲ್ಲದೇ ಮಾತಿಲ್ಲ. ನಾವೇನಾದರೂ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಲಂಚ ತೆಗೆದುಕೊಂಡಿದ್ದರೆ ತನಿಖೆ ಮಾಡಲಿ ಎಂದು ಸವಾಲೆಸೆದರು.

Advertisement

Udayavani is now on Telegram. Click here to join our channel and stay updated with the latest news.

Next