Advertisement

ಮೂಡುಬಿದಿರೆ : ತೈಲ, ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ವಿಶಿಷ್ಟ ಪ್ರತಿಭಟನೆ

03:26 PM Jul 07, 2021 | Team Udayavani |

ಮೂಡುಬಿದಿರೆ : ತೈಲ, ಅನಿಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದರವನ್ನು ಕಡಿಮೆ ಮಾಡುವಂತೆ ಸೈಕಲೇರಿ ಬಂದು ಮಾಜಿ ಸಚಿವ ಅಭಯಚಂದ್ರ ತಹಶಿಲ್ದಾರರಿಗೆ ಮನವಿ ಅರ್ಪಿಸಿದರು.

Advertisement

ದೇಶದಲ್ಲು ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್‌ಮತ್ತು ಅಡುಗೆ ಅನಿಲ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹಮ್ಮಿಕೊಂಡ ಸೈಕಲ್ ಜಾಥಾ ಕ್ಕೆ ಮೂಡುಬಿದಿರೆ ಯಲ್ಲಿ ಅನುಮತಿ ಸಿಗದ ಕಾರಣ ಮಾಜಿ ಸಚಿವ ಕೆ. ಅಭಯಚಂದ್ರ ಅವರು ತಮ್ಮ ಸೈಕಲನ್ನೇರಿ ಮೂಡುಬಿದಿರೆ ಪೇಟೆಯಲ್ಲಿ ಸಾಗಿ ಬಂದು ತಹಶಿಲ್ದಾರರ ರಿಗೆ ಮನವಿ ಸಲ್ಲಿಸಿದರು.

ತೈಲಬೆಲೆ ಏರಿಕೆಯಾಗುತ್ತಿರುವುದರಿಂದವಜನ ಸಾಮಾನ್ಯರು ಬಳಸುವ ಎಲ್ಲ ಸಾಮಗ್ರಿಗಳ ಬೆಲೆ ವಿಪರೀತ ವಾಗಿ ಏರುತ್ತಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಈ ಬೆಲೆ ಏರಿಕೆ ಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೂಕ್ತವಾಗಿ ಸ್ಪಂದಿಸಿ ಜನಸಾಮಾನ್ಯರು ಸ್ವಾಭಿಮಾನದಿಂದ ಬದುಕುವಂತೆ ಮಾಡಬೇಕಾಗಿದೆ ಎಂದು ಅವರು ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next