Advertisement

ಶಾಸಕರನ್ನು ಒಬ್ಬೊಬ್ಬರನ್ನೇ ಕರೆಯುವ ದುಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ!

12:25 PM Jan 18, 2019 | Team Udayavani |

ಬೆಂಗಳೂರು : ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ  ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾದದ್ದು ಮತ್ತು 4 ಶಾಸಕರ ಗೈರಿನ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ  ಅವರು ಲೇವಡಿ ಮಾಡಿದ್ದು, ಇದು ಕಾಂಗ್ರೆಸ್‌ನ ದುಸ್ಥಿತಿ ಎಂದಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ  ಯಾವ ದುಸ್ಥಿತಿ ಗೆ ಕಾಂಗ್ರೆಸ್‌ ಬಂದು ತಲುಪಿದೆ,ಪಕ್ಷದಲ್ಲಿ  ಒಮ್ಮತ ಎಷ್ಟಿದೆ ,ಅತೃಪ್ತಿ ಅಸಮಾಧಾನ ಎಷ್ಟಿದೆ ಎನ್ನುವುದಕ್ಕೆ ಈ ಸಭೆ ಸಾಕ್ಷಿಯಾಗಿದೆ ಎಂದರು. 

ನಮ್ಮ ಬಗ್ಗೆ ಟೀಕೆ ಮಾಡುತ್ತಿರಲ್ಲಾ, ನೀವು  ಈಗಲಾದರೂ ರಾಜ್ಯದ ಆಡಳಿತದ ಕಡೆ ಗಮನ ಕೊಡಿ ಎಂದು ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 

ನಾವು ವಿರೋಧ ಪಕ್ಷವಾಗಿ ಕೈ ಕಟ್ಟಿ ಕೂರುವುದಿಲ್ಲ ಹೋರಾಟಕ್ಕಿಳಿಯುತ್ತಿವೆ ಎಂದರು. 

2008 ರಲ್ಲಿ ಆಪರೇಷನ್‌ ಸಂಸ್ಕೃತಿ ಆರಂಭಿಸಿದ್ದು ನಾನು ಎಂದು ಸಿದ್ದರಾಮಯ್ಯ ಹೇಳುತ್ತಾರೆ . ಇತಿಹಾಸ ನೋಡಿದರೆ  1967 ರಲ್ಲಿ  ಆಯಾರಾಂ , ಗಯಾರಾಂ ಸಂಸ್ಕೃತಿ ಆರಂಭಿಸಿದ್ದು ಕಾಂಗ್ರೆಸ್‌ ಪಕ್ಷ , ಹರಿಯಾಣದಲ್ಲೂ 34 ಜನತಾ ಪಕ್ಷದ ಶಾಸಕರನ್ನು ಕಾಂಗ್ರೆಸ್‌ ಸೆಳೆದಿತ್ತು. ರಾಜಕೀಯ ಇತಿಹಾಸ ಓದಿಕೊಳ್ಳುವುದು ಒಳ್ಳೆಯದು. ಸಿದ್ದರಾಮಯ್ಯ ಕೂಡ ಆಪರೇಷನ್‌ ಸಂಸ್ಕೃತಿಯಿಂದ ಕಾಂಗ್ರೆಸ್‌ಗೆ ಸೇರಿಕೊಂಡಿರುವರೇ ಆಗಿದ್ದಾರೆ ಎಂದು ತಿರುಗೇಟು ನೀಡಿದರು. 

Advertisement

ನಮಗಿರುವ ಚಿಂತೆ ಬೇರೇನು ಅಲ್ಲ ಈ ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ಸಚಿವರು ಪ್ರವಾಸ ಮಾಡುತ್ತಿಲ್ಲ. ಬರ ವಿಪರೀತವಾಗಿದೆ, ಜನರು ವಲಸೆ ಹೋಗುತ್ತಿದ್ದಾರೆ. ಉದ್ಯೋಗಳು ಸಿಗುತ್ತಿಲ್ಲ , ಇನ್ನಾದರೂ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ ಎಂದರು. 

ತಡವಾಗಿ ಆರಂಭವಾದ ಸಿಎಲ್‌ಪಿ ಸಭೆ; ನಾಲ್ವರು ಗೈರು 
3.30 ಕ್ಕೆ ನಿಗದಿಯಾದ ಶಾಸಕಾಂಗ ಪಕ್ಷದ ಸಭೆ ತಡವಾಗಿ ಅಂದರೆ 5.30 ಕ್ಕೆ ಆರಂಭವಾಗಿದೆ. ಸಭೆಗೆ ನಾಲ್ವರು ಬಂಡಾಯ ಶಾಸಕರು ಗೈರಾಗಿದ್ದಾರೆ. ಚಿಂಚೋಳಿ ಶಾಸಕ ಡಾ.ಉಮೇಶ್‌ ಯಾದವ್‌, ಅಥಣಿಯ ಮಹೇಶ್‌ ಕಮಟಳ್ಳಿ  , ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಗೋಕಾಕ್‌ನ ರಮೇಶ್‌ ಜಾರಕಿಹೊಳಿ ಅವರು ಗೈರಾಗಿದ್ದಾರೆ.

ಬಿ.ಸಿ.ಪಾಟೀಲ್‌ ಹಾಜರು, ತುರ್ತು ನಿರ್ಗಮನ
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ  ಹಿರೇಕೆರೂರು ಶಾಸಕ  ಬಿ.ಸಿ.ಪಾಟೀಲ್‌ ಅವರು ಸಭೆಗೆ ಆಗಮಿಸಿ ತುರ್ತಾಗಿ ನಿರ್ಗಮಿಸಿದರು. ಮಗಳ ಮದುವೆ ಇದೆ ಸಿದ್ದರಾಮಯ್ಯ ಅವರಿಗೆ ತಿಳಿಸಿ ಸಭೆಯಿಂದ ತೆರಳುತ್ತಿದ್ದೇನೆ.ನನಗೆ ಬಿಜೆಪಿಯ ಯಾರೂ ಸಂಪರ್ಕ ಮಾಡಿಲ್ಲ  ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next