Advertisement

ನವಜೋತ್‌ ಹೇಳಿಕೆ: 2 ವಾರಗಳ ಬಳಿಕ ದೂರ ಸರಿದ ಕಾಂಗ್ರೆಸ್‌

01:49 PM Feb 28, 2019 | Team Udayavani |

ಹೊಸದಿಲ್ಲಿ : 40 ಭಾರತೀಯ ಯೋಧರನ್ನು ಬಲಿಪಡೆದಿದ್ದ  ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನವನ್ನು ದೂರಲಾಗದು ಎಂಬ ವಿವಾದಾತ್ಮಕ ಹೇಳಿಕೆಯನ್ನು  ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ನೀಡಿದ ಎರಡು ವಾರಗಳ ತರುವಾಯ ಕಾಂಗ್ರೆಸ್‌ ಪಕ್ಷ , ಸಿಧು ಹೇಳಿಕೆಯಿಂದ ದೂರ ಸರಿದಿದೆ.

Advertisement

‘ಸಿಧು ಹೇಳಿಕೆ ಅವರ ವೈಯಕ್ತಿ ಅಭಿಪ್ರಾಯವಾಗಿದ್ದು ಅದು ಪಕ್ಷದ ನಿಲುವನ್ನು ಸೂಚಿಸುವುದಿಲ್ಲ’  ಎಂದು ಹೇಳುವ ಮೂಲಕ ಕಾಂಗ್ರೆಸ್‌ ತನ್ನ ಮುಖವನ್ನು ಉಳಿಸಿಕೊಳ್ಳಲು ಯತ್ನಿಸಿದೆ. 

ಭಾರತ ವಿರೋಧಿ ಅಜೆಂಡಾ ಹೊಂದಿರುವ ಹಲವಾರು ಉಗ್ರ ಸಂಘಟನೆಗಳಿಗೆ ಆಸರೆ ನೀಡಿರುವ ‘ಪಾಕ್‌ ಜತೆ ಭಾರತ ಶಾಂತಿ ಮಾತುಕತೆ ನಡೆಸಬೇಕು’ ಎಂದು ಸಿಧು ಆಗ್ರಹಿಸಿದ್ದರು. 

ಪುಲ್ವಾಮಾ ಉಗ್ರ ದಾಳಿಗೆ ತಾನೇ ಹೊಣೆ ಎಂದು ಪಾಕ್‌ ಮೂಲದ ಜೆಇಎಂ ಉಗ್ರ ಸಂಘಟನೆ ಹೇಳಿಕೊಂಡ ಹೊರತಾಗಿಯೂ ಈ ಕೃತ್ಯಕ್ಕೆ ಪಾಕಿಸ್ಥಾನವನ್ನು ದೂರಲಾಗದು ಎಂದು ಹೇಳಿಕೆ ನೀಡಿದ ಸಿಧು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next