Advertisement

ನಿನ್ನೆ ಬಿಜೆಪಿ ಅಭ್ಯರ್ಥಿ, ಇಂದು ಕಾಂಗ್ರೆಸ್ ಅಭ್ಯರ್ಥಿಯಿಂದ ಸಂಸದೆ ಸುಮಲತಾ ಭೇಟಿ

06:44 PM Nov 26, 2021 | Team Udayavani |

ಬೆಂಗಳೂರು : ಮಂಡ್ಯ ಕ್ಷೇತ್ರದ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಅವರು ಶುಕ್ರವಾರ ಮಂಡ್ಯದ ಸಂಸದೆಯಾಗಿರುವ ಸುಮಲತಾ ಅವರನ್ನು ಭೇಟಿಯಾದರು.

Advertisement

ಬೆಂಗಳೂರಿನ ಜೆಪಿ ನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರನ್ನು ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿತ್ತು, ಹೀಗಾಗಿ ಸುಮಲತಾ ಅವರ ಬೆಂಬಲವನ್ನು ದಿನೇಶ್ ಕೋರಿದ್ದಾರೆ.

ಜಿಲ್ಲೆಯ ಮೇಲೆ ಸುಮಲತಾ ಅವರಿಗೆ ಹೆಚ್ಚಿನ ಹಿಡಿತವಿದೆ, ಸುಮಲತಾ ಅವರ ಬೆಂಬಲ ಸಿಕ್ಕರೆ ಗೆಲುವು ಸುಲಭ,ಹೀಗಾಗಿ ಭೇಟಿ ಮಾಡಿರುವುದಾಗಿ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಗುರುವಾರ ಮಂಡ್ಯ ಜಿಲ್ಲಾ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರು ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪರ ಬೆಂಬಲ ಕೋರಿದ್ದರು.

Advertisement

ನಾನು ತಟಸ್ಥ

ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ತಟಸ್ಥವಾಗಿರುತ್ತೇನೆ, ಯಾವುದೇ ಪಕ್ಷದ ಅಭ್ಯರ್ಥಿಗಳ ಪರವಾಗಿ ಇರುವುದಿಲ್ಲ ಆದರೆ ಸಂಸದೆಯಾಗಿ ಮತ ಹಾಕುತ್ತೇನೆ. ಆಶೀರ್ವಾದ ಕೇಳಿದವರಿಗೆ ಆಶೀರ್ವದಿಸುತ್ತೇನೆ ಎಂದು ಈಗಾಗಲೇ ಸಂಸದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next