Advertisement

ನಾನು ಸುಧಾಕರ್‌ ಬೇನಾಮಿ ಅಲ್ಲ: ಪ್ರದೀಪ್‌

01:52 PM Apr 18, 2023 | Team Udayavani |

ಚಿಕ್ಕಬಳ್ಳಾಪುರ: ನಾನು ಸಚಿವ ಡಾ.ಕೆ.ಸುಧಾಕರ್‌ ಸೇರಿ ದಂತೆ ಯಾರ ಬೇನಾಮಿಯೂ ಅಲ್ಲ, ಡಮ್ಮಿ ಅಭ್ಯರ್ಥಿ ಯೂ ಅಲ್ಲ, ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಧ್ಯೇಯ. ದಯವಿಟ್ಟು ನನ್ನನ್ನು ನಂಬಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಹೇಳಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೇನಾಮಿ ಎಂದು ಯಾರಾದರೂ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಸವಾಲು ಹಾಕಿದರು. ನಾನು ಭ್ರಷ್ಟ ನಲ್ಲ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂತಹ ಸುಳ್ಳು ಹೇಳಿಕೆಗಳನ್ನು ಕ್ಷೇತ್ರದಲ್ಲಿ ಹರಿಬಿಡಲಾಗುತ್ತಿದೆ ಎಂದರು.

ಸುಧಾಕರ್‌ಗೆ ಮೂರನೇ ಸ್ಥಾನ: ಜಮೀನು ಸೇರಿದಂತೆ ಇನ್ನಿತರೆ ವ್ಯಾಜ್ಯ ಹೊಂದಿರುವವರಿಗೆ ಇಲ್ಲಸಲ್ಲದ ಆಸೆ ಆಮಿಷ ಒಡ್ಡುವ ಮೂಲಕ ಬಿಜೆಪಿಯತ್ತ ಸೆಳೆಯಲಾಗು ತ್ತಿದೆ. ಆದರೆ ಚುನಾವಣೆಯು 2-3 ದಿನ ಬಾಕಿಯಿರು ವಾ ಗಲೇ ಭಾರೀ ಸಂಖ್ಯೆಯಲ್ಲಿ ಎಲ್ಲರೂ ಕಾಂಗ್ರೆಸ್‌ನತ್ತ ಬರಲಿದ್ದಾರೆ. ನಿವೇಶನ ವಿತರಣೆ ಸೇರಿ ನೀಡಿರುವ ಯಾವುದೇ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಸುಧಾ ಕರ್‌ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆಯಲಿದ್ದು, ಈ ಸ್ಥಾನಕ್ಕೆ ಅವರೇ ಹೇಳಿರುವಂತೆ ಯಾರು ಪ್ರತಿ ಸ್ಪರ್ಧಿಯಿರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಿದೆ: ಕ್ಷೇತ್ರ ದಲ್ಲಿ ಕೋವಿಡ್‌ ವೇಳೆಯೂ ಭ್ರಷ್ಟಾಚಾರ ನಡೆದಿದೆ. ಹಣದಿಂದ ಪ್ರತಿ ಬಾರಿಯೂ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ. 40 ಪರ್ಸೆಂಟ್‌ ಸರ್ಕಾರಕ್ಕೆ ಮುನ್ನುಡಿ ಬರೆದ ಸುಧಾಕರ್‌ ಈ ಬಾರಿಯ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದ್ದು, ಅವರ ಪಕ್ಷದವರೇ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ ಎಂದರು.

ನಾನು ಶಾಸಕನಾಗಿ ಆಯ್ಕೆಯಾದರೆ ಚಿಕ್ಕಬಳ್ಳಾಪುರವನ್ನು ಭ್ರಷ್ಟಾಚಾರ ಮುಕ್ತ, ಮಾದರಿ ಕ್ಷೇತ್ರವನ್ನಾಗಿಸುವ ಜೊತೆಗೆ ಕ್ಷೇತ್ರದಲ್ಲಿ 220ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಅಭಿವೃದ್ಧಿ ಮಾಡಲಾಗುವುದು. ವಿದ್ಯಾರ್ಥಿನಿಲಯಗಳ ಅಭಿವೃದ್ಧಿ, ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಹೇಳಿದರು.

Advertisement

ಮಾಜಿ ಶಾಸಕ ಎಂ.ಶಿವಾನಂದ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಶಾಸಕರಾಗಲು ಹವಣಿ ಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಕ್ಷೇತ್ರಗಳ ಅಭಿವೃದ್ಧಿಯೊಂದೇ ಮೂಲಮಂತ್ರವಾಗಿದೆ. ಹಲವು ವರ್ಷಗಳ ಹಿಂದೆ ಸಿ.ವಿ.ವೆಂಕಟರಾಯಪ್ಪ ಹಾಗೂ ಕೆ.ಬಿ.ಪಿಳ್ಳಪ್ಪರ ನಡುವೆ ನಡೆದ ಪೈಪೋಟಿಯು ಪ್ರಸ್ತುತದ ಚುನಾವಣೆಯಲ್ಲಿ ಮರುಕಳುಹಿಸಲಿದ್ದು, ಪ್ರದೀಪ್‌ ಈಶ್ವರ್‌ ಗೆಲುವು ಶತಸಿದ್ಧ ಎಂದು ನುಡಿದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮೋಹನ್‌ರೆಡ್ಡಿ, ಕಾಂಗ್ರೆಸ್‌ ಸೇವಾ ದಳದ ಅಧ್ಯಕ್ಷ ಹನುಮಂತಪ್ಪ, ಎಪಿಎಂಸಿ ಮಾಜಿ ನಿರ್ದೇಶಕರಾದ ಮಿಲ್ಟನ್‌ ವೆಂಕಟೇಶ್ ಮಂಚನಬಲೆ ಇಸ್ಮಾಯಿಲ್‌, ಪ್ರಕಾಶ್‌, ಜಯರಾಮ್‌ ಇದ್ದರು. ‌

ಮನೆ ಬಾಡಿಗೆ ನೀಡದಂತೆ ಕುತಂತ್ರ: ಆರೋಪ : ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಸೋಲುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಗೃಹ ಕಚೇರಿಗೆ ಮನೆ ನೋಡಿದರೆ ಕೆಲವರನ್ನು ಕಳುಹಿಸಿ ಮನೆ ಬಾಡಿಗೆ ನೀಡದಂತೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನನ್ನನ್ನು ಟಾರ್ಗೆಟ್‌ ಮಾಡಿದರೆ ಹೆದರುವುದಿಲ್ಲ. ಆದರೆ ನಾನು ಅವರನ್ನು ಟಾರ್ಗೆಟ್‌ ಮಾಡಿದರೆ ಅದನ್ನು ಸಮರ್ಥವಾಗಿ ಎದುರಿಸಲು ಅವರು ವಿಫ‌ಲವಾಗಲಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಹೇಳಿದರು.

66 ಕಾರ್ಯಕರ್ತರ ವಿರುದ್ಧ ದೂರು : ಕೋಚಿಮುಲ್‌ ನಿರ್ದೇಶಕ ಭರಣಿ ವೆಂಕಟೇಶ್‌ ಮಾತನಾಡಿ, 2013ಕ್ಕೆ ಹೋಲಿಸಿದರೆ ಸುಧಾಕರ್‌ ಅವರ ಆಸ್ತಿ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ಷೇತ್ರದಲ್ಲಿ ಅವರ ವಿರುದ್ಧ ಮಾತನಾಡಿರುವ 66 ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿ 21 ಮಂದಿಯನ್ನು ಜೈಲಿಗೆ ಕಳುಹಿಸಿದ್ದರು. ಸೇಡಿನ ರಾಜಕಾರಣ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next