Advertisement

ಲಂಚದ ಮೇಲೆ ಕಣ್ಣಿಟ್ಟು ರಫೇಲ್‌ ಡೀಲ್‌ ಅಡಿಗೆ ಹಾಕಿ ಕೂತಿದ್ದ ಕಾಂಗ್ರೆಸ್‌: ಮೋದಿ

09:23 AM Mar 29, 2019 | Team Udayavani |

ಡೆಹರಾಡೂನ್‌ : ಲಂಚದ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಸರಕಾರ ರಫೇಲ್‌ ಯುದ್ಧ ವಿಮಾನ ಖರೀದಿ ವ್ಯವಹಾರವನ್ನು ಅಡಿಗೆ ಹಾಕಿ ಕೂತಿತು; ಇದರಿಂದಾಗಿಯೇ ರಫೇಲ್‌ ಫೈಟರ್‌ ಜೆಟ್‌ ಭಾರತೀಯ ಸೇನೆಗೆ ಸಕಾಲದಲ್ಲಿ ಸಿಗದೇ ಹೋಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಉತ್ತರಾಖಂಡದ ರುದ್ರಾಪುರದಲ್ಲಿ ಚುನಾವಣಾ ಪ್ರಚಾರಾಭಿಯಾನವನ್ನು ಆರಂಭಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ಸರಕಾರ ದೇಶದ ಭದ್ರತೆಗಿಂತಲೂ ಕಮಿಷನ್‌ಗೆ ಆದ್ಯತೆ ನೀಡಿತ್ತು ಎಂದು ಆರೋಪಿಸಿದರು.

ಬಿಜೆಪಿಯು ಸೇನೆಯ ಬೆನ್ನಿಗೆ ನಿಂತಿರುವ ಪಕ್ಷವಾಗಿದೆ. ಕಾಂಗ್ರೆಸ್‌ ಸರಕಾರ ಸೇನೆಯ ಅಗತ್ಯಗಳಿಗೆ ಕನಿಷ್ಠ ಸ್ಪಂದನೆ ತೋರಿತು. ಆದರೆ ಬಿಜೆಪಿ ಸರಕಾರ ಸೇನೆಗೆ ಅವಶ್ಯವಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರ, ಬುಲೆಟ್‌ ಪ್ರೂಫ್ ಜ್ಯಾಕೆಟ್‌ಗಳು, ಏಕ ರೂಪದ ಪಿಂಚಣಿ ಇತ್ಯಾದಿಗಳನ್ನು ನೀಡಿತು ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next