Advertisement

Nationalists ಒಟ್ಟಾಗುವ ವಿಶ್ವಾಸ: ಪುತ್ತಿಲ ಸ್ಪರ್ಧೆ ಬಗ್ಗೆ ನಳಿನ್‌ ಕುಮಾರ್‌

01:06 AM Mar 01, 2024 | Team Udayavani |

ಮಂಗಳೂರು: ದೇಶ, ಹಿಂದುತ್ವ, ಹಿಂದೂ ಸಮಾಜದ ಹಿತ ದೃಷ್ಟಿಯಿಂದ ಯಾರೆಲ್ಲ ರಾಷ್ಟ್ರವಾದ ಮಾತಾಡುತ್ತಾರೋ ಅವರೆಲ್ಲರೂ ಒಟ್ಟಾಗುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಹಿಂದೂಪರ ಹೋರಾಟಗಾರ ಅರುಣ್‌ ಪುತ್ತಿಲ ಸ್ವತಂತ್ರವಾಗಿ ಸ್ಪರ್ಧಿ ಸುವ ನಿರ್ಧಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಂಗಳೂರಿನಲ್ಲಿ ಉತ್ತರಿಸಿದ ನಳಿನ್‌, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕಿದೆ. ಅನೇಕ ಸಂದರ್ಭಗಳಲ್ಲಿ ಒಂದೊಂದು ರೀತಿಯ ಸವಾಲು ಇರುತ್ತದೆ. ಆ ಸವಾಲುಗಳ ಮಧ್ಯೆ ಬಿಜೆಪಿ ಗೆಲುವು ಸಾಧಿಸಿದೆ. ಈ ಬಾರಿಯಂತೂ ದೇಶದಲ್ಲಿ ಮೋದಿಮಯ ವಾತಾವರಣವಿದೆ. ವಿಧಾನಸಭಾ ಚುನಾ ವಣೆ ಬೇರೆ. ಲೋಕಸಭೆ ಚುನಾವಣೆ ಬೇರೆ. ಆಗ ಮತ್ತು ಈಗ ಪರಿಸ್ಥಿತಿ, ಸನ್ನಿವೇಶಗಳೇ ಬೇರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next