Advertisement

ಸ್ತ್ರೀ ಸಮಾನತೆಗೆ ಹೋರಾಟ ಮಾಡಿದ್ದ ದಿಟ್ಟೆ ಅಕ್ಕಮಹಾದೇವಿ

04:53 PM Apr 13, 2017 | Harsha Rao |

ಸೋಮವಾರಪೇಟೆ: 12ನೇ ಶತಮಾನದಲ್ಲೇ ಸ್ತ್ರೀ ಸಮಾನತೆಗೆ ಹೋರಾಟ ಮಾಡಿದ ದಿಟ್ಟ ಮಹಿಳೆ ಅಕ್ಕಮಹಾದೇವಿ ಎಂದು ತುಮಕೂರಿನ ನಿವೃತ್ತ ಉಪನ್ಯಾಸಕಿ ಅಮೃತಾ ವೀರಭದ್ರಯ್ಯ ಬಣ್ಣಿಸಿದರು. 

Advertisement

ಇಲ್ಲಿನ ಅಕ್ಕನ ಬಳಗದ ಆಶ್ರಯದಲ್ಲಿ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಕ್ಕಮಹಾ ದೇವಿ ಜಯಂತಿ ಹಾಗೂ ಅಕ್ಕನ ಬಳಗದ ಬೆಳ್ಳಿಹಬ್ಬ ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು. 12ನೇ ಶತಮಾನದ ಪುರುಷ ಪ್ರಧಾನ ಸಮಾಜದಲ್ಲಿದ್ದ ಲಿಂಗಭೇದ‌, ಅಸಮಾನತೆ, ಕಂದಾಚಾರಗಳ ನಡುವೆ ಜೀವನದ ಆಸೆ ಅಕಾಂಕ್ಷೆಗಳನ್ನು ತೊರೆದು ಮನೆ ಬಿಟ್ಟು ಸಮಾಜ ಸುಧಾರಣೆಗೆ ಹೊರಟ ಮಹಾನ್‌ ಸಾಧ್ವಿ ಎಂದರು. 

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡದ ಜೀವನ ಸಾಗಿಸುತ್ತಿರುವ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಆಸ್ತಿ, ಐಶ್ವರ್ಯವಿದ್ದರೂ ನೆಮ್ಮದಿ ಹುಡುಕುವಂತಾಗಿದೆ. ದ್ವೇಷ, ಅಸೂಯೆಗಳಿಂದ ಜೀವನ ಜರ್ಝರಿತವಾಗುತ್ತಿದೆ. 12ನೇ ಶತಮಾನದ ಶರಣರ ಜೀವನ ಇಂದಿನ ಜನಾಂಗಕ್ಕೆ ಆದರ್ಶವಾಗಬೇಕು. ಶರಣರ ಸ್ಮರಣೆಯಷ್ಟೆ ಸಾಲದು ಅವರ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕೆಂದರು.  

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪಟ್ಟಣ ವಿರಕ್ತ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ, ಅಧ್ಯಕ್ಷತೆಯನ್ನು ಅಕ್ಕನ ಬಳಗದ ಅಧ್ಯಕ್ಷೆ ಜಲಜಾಶೇಖರ್‌ ವಹಿಸಿದ್ದರು. 

ಕಳೆದ 25 ವರ್ಷದ ಅವಧಿಯಲ್ಲಿ ಅಕ್ಕನ ಬಳಗದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ದಾûಾಯಿಣಿ ಬಸವಕುಮಾರ್‌, ಆನಂದಮಯಿಕೆರೆ, ರತ್ನಮ್ಮ ಜಯರುದ್ರಪ್ಪ, ಶಾರದ ಶಂಕರಪ್ಪ, ಸುಮಾ ಸುದೀಪ್‌, ಉಷಾ ತೇಜಸ್ವಿ, ಭಗವತಿ ದೇಶ್‌ಮುಖ್‌, ಜಲಜಾಶೇಖರ್‌ರವರನ್ನು ಸಮ್ಮಾನಿಸಲಾಯಿತು.

Advertisement

ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್‌, ಉಪಾಧ್ಯಕ್ಷ ತೇಜಸ್ವಿ, ಬಸವೇಶ್ವರ ಯುವಕ ಸಂಘದ  ಅಧ್ಯಕ್ಷ ಮಹೇಶ್‌, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಕ್ಕನ ಬಳಗದ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್‌, ಕಾರ್ಯದರ್ಶಿ ಲತಾ ಮಂಜುನಾಥ್‌, ಸಹ ಕಾರ್ಯದರ್ಶಿ ಜಲಜಾ ವಿಜಯ್‌ಕುಮಾರ್‌, ನಿರ್ದೇಶಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next