Advertisement

ಉದ್ಘಾಟನೆಗೊಂಡ 2 ತಿಂಗಳಲ್ಲೇ ಕಿತ್ತುಹೋದ ಕಾಂಕ್ರೀಟ್‌ 

06:10 AM Aug 04, 2018 | Team Udayavani |

ಮಲ್ಪೆ: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ಮತ್ತು ಕೆಳಾರ್ಕಳಬೆಟ್ಟು ರಸ್ತೆಯನ್ನು ಸಂಪರ್ಕಿಸುವ ಶ್ರೀನಗರದ ಬಳಿಯ ಕಾಂಕ್ರೀಟ್‌ ರಸ್ತೆ ಉದ್ಘಾಟನೆಗೊಂಡ ಎರಡು ತಿಂಗಳಲ್ಲೇ ಜಲ್ಲಿ ಎದ್ದು ಹೋಗಿದ್ದು  ಇಲ್ಲಿ  ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

Advertisement

ಅಲ್ಲಲ್ಲಿ  ಜಲ್ಲಿಕಲ್ಲು  ಮತ್ತು ಸಿಮೆಂಟ್‌ ಮೇಲೆದ್ದು ರಸ್ತೆ  ಸಂಪೂರ್ಣ ಹಾಳಾಗಿದೆ. ಜಲ್ಲಿಕಲ್ಲುಗಳು ರಸ್ತೆಯಿಂದ ಎದ್ದು  ಬೈಕು ಸವಾರರಿಗೆ ಅಡಚಣೆ ಉಂಟಾಗಿದೆ. ಕಳೆದ ಅಕ್ಟೋಬರ್‌ ತಿಂಗಳಲ್ಲಿ   ಕಾಮಗಾರಿ ನಡೆಸಲಾಗಿದ್ದು ಉದ್ಘಾಟನೆಗೊಂಡು ಎರಡು ಮೂರು ತಿಂಗಳೊಳಗೆ ಜಲ್ಲಿ ಎದ್ದು ಹೋಗಿದೆ. ಕಳೆದ ಹಲವಾರು ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಸಂಬಂಧಪಟ್ಟ ಆಡಳಿತಕ್ಕೆ ಮನವಿ ಮಾಡಲಾಗಿತ್ತು. ಕೊನೆಗೂ ಇಲ್ಲಿನ ರಸ್ತೆಗೆ ಕಾಂಕ್ರೀಟ್‌ ಭಾಗ್ಯ ದೊರಕಿದ್ದರೂ ಇದೀಗ ಕಳಪೆ ಕಾಮಗಾರಿಯಿಂದ ಈ ಹಿಂದಿನ ಸ್ಥಿತಿ ಬಂದೊದಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ರಸ್ತೆಯ ಕಾಮಗಾರಿಯಲ್ಲಾದ ಲೋಪದೋಷಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವ್ಯವಸ್ಥಿತವಾಗಿ ಕಾಮಗಾರಿ ನಡೆಸಲು ಸೂಚನೆ
ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ನಾಗರಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಪಂಚಾಯತ್‌ ಮೂಲಕ ಸಂಬಂಧಪಟ್ಟ ಇಲಾಖೆಗೆ ಈ ಬಗ್ಗೆ ದೂರು ನೀಡಲಾಗಿದ್ದು ತತ್‌ಕ್ಷಣ ಪರಿಶೀಲನೆ ನಡೆಸಿ, ವ್ಯವಸ್ಥಿತವಾಗಿ ಕಾಮಗಾರಿ ನಡೆಸುವಂತೆ ಆಗ್ರಹಿಸಲಾಗಿದೆ.

– ಜಯಕುಮಾರ್‌ ಬೆಳ್ಕಳೆ, ಅಧ್ಯಕ್ಷರು ತೆಂಕನಿಡಿಯೂರು ಗ್ರಾ.ಪಂ.
 

Advertisement

Udayavani is now on Telegram. Click here to join our channel and stay updated with the latest news.

Next