Advertisement

ಸಮಗ್ರ ನೀರಾವರಿ ಮಾಡುವುದೇ ಮುಖ್ಯ ಗುರಿ: ಮಾನಪ್ಪ ವಜ್ಜಲ್‌

01:14 PM Apr 21, 2022 | Team Udayavani |

ಮುದಗಲ್ಲ: ನಾನು ಮಾತು ಕೊಟ್ಟಂತೆ ನಂದವಾಡಗಿ ಏತ ನೀರಾವರಿ ಯೋಜನೆಯಿಂದ ವಂಚಿತವಾದ 30 ಹಳ್ಳಿಗಳನ್ನು ಸಮಗ್ರ ನೀರಾವರಿ ಮಾಡುವುದೇ ನನ್ನ ಕನಸಿನ ಗುರಿಯಾಗಿದೆ ಎಂದು ಮಾಜಿ ಶಾಸಕ ಹಾಗೂ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ್‌ ಹೇಳಿದರು.

Advertisement

ಸಮೀಪದ ಛತ್ತರ ಗ್ರಾಮದಲ್ಲಿ ಕುಮಾರ ಕೇಡ, ಗೊಲ್ಲರಹಟ್ಟಿ, ವ್ಯಾಕರನಾಳ, ಛತ್ತರ ಸೇರಿದಂತೆ ವಿವಿಧ ಹಳ್ಳಿಗಳ ಜನರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನು ಮುಂದೆ ನಿಮ್ಮ ಕಷ್ಟ-ಸುಖಗಳಿಗೆ ಹಗಲಿರುಳು ದುಡಿದು ನಿಮ್ಮ ಋಣ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್‌ ಲೆಕ್ಕಿಹಾಳ್‌, ಮುದಗಲ್‌ ಘಟಕದ ಅಧ್ಯಕ್ಷ ಸಣ್ಣ ಸಿದ್ದಯ್ಯ ಗ್ಯಾನಪಯ್ಯನವರ, ಪಕ್ಷದ ಮುಖಂಡರಾದ ಗಿರಿ ಮಲ್ಲನಗೌಡ ಪಾಟೀಲ್‌ ಕರಡಕಲ್‌, ಮಹಾಂತಗೌಡ ಬಯ್ನಾಪುರ, ಹುಲ್ಲೇಶ್‌ ಸಾಹುಕಾರ್‌, ಗೋವಿಂದ ನಾಯಕ್‌, ಮಲ್ಲಪ್ಪ ಮಾಟೂರ್‌ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next