Advertisement
ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ದ.ಕ. ಫಿಸಿಯೋಥೆರಪಿ ಶಿಕ್ಷಕರ ಸಂಘದ ಆಶ್ರಯಧಿದಲ್ಲಿ ಮಣಿಪಾಲದ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್ (ಎಸ್ಒಎಎಚ್ಎಸ್) ಮಂಗಳಧಿವಾರ ಆಯೋಜಿಸಿದ “ಫಿಸಿಯೋಕಾನ್ 2017′ ಪೂರ್ವಧಿಸಮ್ಮೇಳನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಸಂಪನ್ಮೂಲಕ್ಕೆ ತರಬೇತಿ, ಶಿಕ್ಷಣವನ್ನು ಕೊಟ್ಟರೆ ಅದೇ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಮಣಿಪಾಲದ ಶಿಕ್ಷಣ ಸಂಸ್ಥೆಗಳು. ಬೆಂಗಳೂರು ಮಾಹಿತಿ ತಂತ್ರಧಿಜ್ಞಾನದ ಕೇಂದ್ರವಾಗಿ ಬೆಳೆಯಲು ಹಿಂದಿಧಿನವರು ಆರಂಭಿಸಿದ ಎಂಜಿನಿಯರಿಂಗ್ ಕಾಲೇಜುಧಿಗಳು ಕಾರಣ. ಮಣಿಪಾಲ ಸಂಸ್ಥೆ ಉತ್ತರ ಕರ್ನಾಟಕಧಿದಲ್ಲಿಯೂ ಕ್ಯಾಂಪಸ್ ತೆರೆದು ಅಲ್ಲಿನ ಅಬಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
Related Articles
Advertisement
ಕುಲಪತಿ ಡಾ| ಎಚ್. ವಿನೋದ ಭಟ್ ಸ್ವಾಗತಿಸಿ ಎಸ್ಒಎಎಚ್ಎಸ್ ಡೀನ್ ಡಾ| ರಾಜಶೇಖರ್ ಅತಿಥಿಗಳನ್ನು ಪರಿಚಯಿಸಿದರು. ಕರ್ನಾಟಕ ರಾಜ್ಯ ಫಿಸಿಯೋಥೆರಪಿ ಫೆಡರೇಶನ್ ಕಾರ್ಯಾಧ್ಯಕ್ಷ ಡಾ| ಯು.ಟಿ. ಇಫ್ತಿಕಾರ್ ಅಲಿ ಪ್ರಸ್ತಾವನೆಗೈದರು. ವಿ.ವಿ. ಮಂಗಳೂರು ಕ್ಯಾಂಪಸ್ ಸಹಕುಲಪತಿ ಡಾ| ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.ಫಿಸಿಯೋಥೆರಪಿ ಉಪನ್ಯಾಸಕ ಅಬ್ರಹಾಂ ಸ್ಯಾಮುವೆಲ್ ಬಾಬು ನಿರ್ವಹಿಸಿ, ವಿಭಾಗ ಮುಖ್ಯಸ್ಥೆ ಡಾ| ವೈಶಾಲಿ ಕೆ. ವಂದಿಸಿದರು.