Advertisement

Shivanand Patil “ಗಂಡಸ್ತನ’ ಸವಾಲಿಗೆ ಬಾಗಲಕೋಟೆಯಲ್ಲೇ ಉತ್ತರ: ಯತ್ನಾಳ್‌

11:46 PM Apr 14, 2024 | Team Udayavani |

ವಿಜಯಪುರ: ಗಂಡಸ್ತನ ಇದ್ದರೆ ನನ್ನ ವಿರುದ್ಧ ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರನಾಗಿಸ್ಪರ್ಧಿಸಲಿ ಎಂದು ಸಚಿವ ಶಿವಾನಂದ ಪಾಟೀಲ್‌ ಹಾಕಿರುವ ಸವಾಲಿಗೆ ಬಾಗಲಕೋಟೆಗೆ ಹೋಗಿಯೇ ಉತ್ತರ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಅವ ಆಹ್ವಾನ ಕೊಡುತ್ತಾನೆ. ಆಹ್ವಾನ ಕೊಡುವುದು ಅವನ ಉದ್ಯೋಗ. ಪ್ರತಿ ಚುನಾವಣೆಯಲ್ಲೂ ಇಂಥ ಹೇಳಿಕೆಯ ಉದ್ಯೋಗ ಮಾಡಿಕೊಂಡೇ ಅವನು ಜೀವನ ಮಾಡುತ್ತಿದ್ದಾನೆ. ಈಗ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಮಗಳನ್ನು ಕಣಕ್ಕಿಳಿಸಿದ್ದಾನೆ. ಬಾಗಲಕೋಟೆಗೆ ಹೋಗಿಯೇ ಏನು ಹೇಳಬೇಕೋ ಅದನ್ನು ಹೇಳುತ್ತೇನೆ. ಮುಂದಿನ ಕ್ಷೇತ್ರ ಮರು ವಿಂಗಡನೆೆ ವೇಳೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮಧ್ಯೆ 3 ಲೋಕಸಭೆ ಕ್ಷೇತ್ರಗಳು ಸೃಷ್ಟಿಯಾಗಲಿದ್ದು, ಆಗ ವಿಜಯಪುರ ಸಾಮಾನ್ಯ ಕ್ಷೇತ್ರವಾಗಲಿದೆ. ಗಂಡಸ್ತನ ಇದ್ದರೆ ಆಗ ಬಂದು ಸ್ಪರ್ಧೆ ಮಾಡಲಿ ಎಂದು ಸವಾಲೆಸೆದರು.

ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ
ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ರಹಸ್ಯ ಬಿಚ್ಚಿಡುತ್ತೇನೆ ಎಂಬ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಎಲ್ಲರ ರಹಸ್ಯ ಇದ್ದೇ ಇರುತ್ತದೆ. ಅಂಥ ಹಲ್ಕಾ ಕೆಲಸ ಮಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next