Advertisement

ಸಚಿವ ರಮಾನಾಥ ರೈ ವಿರುದ್ಧ ಲೋಕಾಯುಕ್ತಗೆ ದೂರು

08:05 AM Nov 16, 2017 | Team Udayavani |

ಮಂಗಳೂರು: “ದ.ಕ.ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ರಬ್ಬರ್‌ ತೋಟ ಮಾಡಿದ್ದು, ಈ ಬಗ್ಗೆ ಸದ್ಯದಲ್ಲೇ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ನೀಡುವುದಾಗಿ’ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈ ಅವರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ನುಣುಚಿಕೊಳ್ಳುವ
ಯತ್ನ ಮಾಡುತ್ತಿದ್ದಾರೆ. 28 ಎಕರೆ ಸರಕಾರಿ ಜಾಗದಲ್ಲಿ 10 ಎಕರೆ ಸರಕಾರಿ ಜಾಗ ಕಬಳಿಸಿ ರಬ್ಬರ್‌ ಬೆಳೆದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ವೆ ನಡೆಸಿದರೆ ಸತ್ಯ ಬಯಲಾಗುತ್ತದೆ ಎಂದರು. ಸರಕಾರ ಅಕ್ರಮ ಸಕ್ರಮ ಪದ್ಧತಿ ಜಾರಿಗೆ ತಂದದ್ದು ಸಣ್ಣ ರೈತರಿಗೋಸ್ಕರ. ಆದರೆ, ರಮಾನಾಥ ರೈ ಅವರ ಪತ್ನಿ ಹೆಸರಲ್ಲಿ 6 ಸಾವಿರ ರೂ.ಆದಾಯ ದಾಖಲು ಮಾಡಿ ಮಾಣಿ ಗ್ರಾಮದಲ್ಲಿ 4 ಎಕರೆ ಜಮೀನನ್ನು ಅಕ್ರಮ ಸಕ್ರಮ ಮೂಲಕ ಪಡೆದಿದ್ದಾರೆ. ಬಂಟ್ವಾಳ ಬಳಿಯ ರಾಜರಾಜೇಶ್ವರಿ ಭಜನಾ ಮಂದಿರದ ಪಕ್ಕದಲ್ಲಿನ ರೈ ಅವರ ಸರಕಾರಿ ಜಮೀನಿನಲ್ಲಿ ಪಂಪ್‌ ಸೆಟ್‌ ಇದ್ದು, ಇದು ಅಕ್ರಮವಾಗಿದೆ ಎಂದು ಆರೋಪಿಸಿದರು. ಅಲ್ಲದೆ, ತಮಗೆ ಈಗಾಗಲೇ 5 ಬೆದರಿಕೆ ಪತ್ರಗಳು ಬಂದಿವೆ ಎಂದರು.

ಮಾನನಷ್ಟ ಮೊಕದ್ದಮೆ
ಮಂಗಳೂರು: ಭೂ ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಹರಿಕೃಷ್ಣ ಬಂಟ್ವಾಳ ಅವರು ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಅಲ್ಲದೆ, ಹರಿಕೃಷ್ಣ ಬಂಟ್ವಾಳ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಚಿವರು “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next