Advertisement

ಮೋದಿ ಟೀಕಿಸಿದ ಅನ್ಸಾರಿ ವಿರುದ್ಧ ದೂರು ದಾಖಲು

10:52 PM Nov 12, 2019 | Team Udayavani |

ಗಂಗಾವತಿ: ಪ್ರಧಾನಿ ಮೋದಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ವಿರುದ್ಧ ಕೇಸ್‌ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರಟಗಿಯಲ್ಲಿ ನಡೆದ ಕಾಂಗ್ರೆಸ್‌ ಸದ್ಭಾವನಾ ಯಾತ್ರೆಯಲ್ಲಿ ಅನ್ಸಾರಿ ಅವರು, ಮೋದಿ ಕಾಲ್ಗುಣ ಸರಿಯಿಲ್ಲ. ಅವರು ಪ್ರಧಾನಿಯಾದ ಬಳಿಕ ಬಿಜೆಪಿ ಹಿರಿಯ ನಾಯಕರು ಮರಣ ಹೊಂದುತ್ತಿದ್ದಾರೆಂದು ಟೀಕಿಸಿರುವುದು ಖಂಡನೀಯ. ಅನ್ಸಾರಿ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕೇಸ್‌ ದಾಖಲಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next