Advertisement

Anti-Nuclear ವಿಪಕ್ಷಗಳಿಂದ ದೇಶ ರಕ್ಷಣೆ ಅಸಾಧ್ಯ: ಮೋದಿ ಟೀಕೆ

12:43 AM Apr 15, 2024 | Team Udayavani |

ಭೋಪಾಲ್‌: ಶತ್ರುಗಳು ನಮ್ಮ ವಿರುದ್ಧ ಅಸ್ತ್ರಗಳನ್ನು ಹಿಡಿದು ನಿಂತಿರುವ ಸಂದರ್ಭದಲ್ಲಿ ದೇಶ ರಕ್ಷಣೆಗೆ ಅಗತ್ಯವಾದುದನ್ನು ಮಾಡುವುದನ್ನು ಬಿಟ್ಟು ಇಂಡಿಯಾ ಒಕ್ಕೂಟವು ದೇಶವನ್ನೇ ಅಣ್ವಸ್ತ್ರ ಮುಕ್ತ ಗೊಳಿಸುವ ಬಗ್ಗೆ ಮಾತನಾಡುತ್ತಿದೆ. ಅಣ್ವಸ್ತ್ರಗಳನ್ನು ಯಾರು ವಿರೋಧಿಸುತ್ತಾರೋ ಅವರು ದೇಶವನ್ನು ರಕ್ಷಿಸಲಾರರು ಎಂದು ವಿಪಕ್ಷಗಳ ಒಕ್ಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಹೊಶಂಗಾಬಾದ್‌ನ ಪಿಪಾ ರಿಯಾ ನಗರದಲ್ಲಿ ಮಾತನಾಡಿ, ಸಿಪಿಎಂನ ಪ್ರಣಾಳಿಕೆ ವಿಚಾರ ಪ್ರಸ್ತಾವಿಸಿ ಇಂಡಿಯಾ ಒಕ್ಕೂಟ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

Advertisement

ರಾಹುಲ್‌ನನ್ನು ದೇಶ ಗಂಭೀರವಾಗಿ ಪರಿಗಣಿಸಿಲ್ಲ
ಶೆಹಜಾದ (ರಾಜಕುಮಾರ)ರನ್ನು ದೇಶ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂಸದ ರಾಹುಲ್‌ ಗಾಂಧಿ ಹೆಸರು ಉಲ್ಲೇಖೀಸದೆ ಪ್ರಧಾನಿ ಟೀಕಿಸಿದ್ದಾರೆ. ಒಂದೇ ಸ್ಪರ್ಶದಲ್ಲಿ ದೇಶದ ಬಡತನವನ್ನು ತೊಲಗಿಸಿ ಬಿಡುವುದಾಗಿ ಅವರು ಹೇಳುತ್ತಾರೆ. ಹೀಗಾಗಿ ಅವರನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆ ಅವರ ಅಜ್ಜಿ (ಮಾಜಿ ಪಿಎಂ ಇಂದಿರಾ) ಕೂಡ “ಗರೀಬಿ ಹಟಾವೋ’ ಎಂದು ಕರೆ ನೀಡಿದ್ದರು ಎಂದರು. ಜತೆಗೆ ಅವರೊಬ್ಬ ಶ್ರೀಮಂತ ಜಾದೂಗಾರ ಎಂದೂ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next