Advertisement

ದೂರು ಕೊಟ್ಟ ಮಾಲಕನೆ ಕಳ್ಳ !;ಶಿವಮೊಗ್ಗ ಕಾರು ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್

07:42 PM Jan 06, 2023 | Team Udayavani |

ಶಿವಮೊಗ್ಗ: ಕಾರು ಕಳೆದು ಹೋಗಿದೆ ಎಂದು ದೂರು ಕೊಟ್ಟು ಯಾಮಾರಿಸಲು ಹೋದ ಮಾಲಕನೇ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ವಿದ್ಯಾನಗರದ ಚಂದ್ರುಕುಮಾರ್ (28) ಹಾಗೂ ದಾವಣಗೆರೆ ಸರಸ್ವತಿ ನಗರದ ಪ್ರಶಾಂತ್ (29) ಬಂಧಿತ ಆರೋಪಿಗಳು. ಇಲ್ಲಿನ ಸೂಳೆಬೈಲಿನಲ್ಲಿ ಕಾರನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆಂದು ಚಂದ್ರುಕುಮಾರ್ ದೂರು ನೀಡಿದ್ದ. ಪ್ರಕರಣ ವಿಚಾರಣೆ ನಡೆಸಿದ ಪೊಲೀಸರಿಗೆ ಮಾಲಕನ ಮೇಲೆ ಅನುಮಾನ ಬಂದು ತನಿಖೆಗೆ ಒಳಪಡಿಸಿದಾಗ ಕಾರಿನ ಮೇಲಿದ್ದ ಲೋನ್ ಕಟ್ಟದೇ ಫೈನಾನ್ಸ್ ಗೆ ಮೋಸ ಮಾಡುವ ಹಾಗೂ ಕಾರಿನ ಇನ್ಶೂರೆನ್ಸ್ ಪಡೆಯುವ ಸಲುವಾಗಿ ಕಾರನ್ನು ದಾವಣಗೆರೆ ಪ್ರಶಾಂತ್‌ಗೆ ನೀಡಿ ನಂಬರ್ ಪ್ಲೇಟ್ ಬದಲಾಯಿಸಿದ್ದರು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆಯಲ್ಲಿ ಪಿಐ ಮಂಜುನಾಥ್, ಪಿಎಸ್‌ಐ ದೂದ್ಯಾನಾಯ್ಕ್, ಎಎಸ್‌ಐ ಮನೋಹರ್, ಸಿಬಂದಿ ಕಿರಣ್ ಮೋರೆ, ಅರುಣ್‌ಕುಮಾರ್, ಮೋಹನ್ ಕುಮಾರ್, ನಾಗಪ್ಪ, ಹರೀಶ್ ನಾಯ್ಕ, ಹರಿಹಂತ ಶಿರಹಟ್ಟಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next