Advertisement

ಅನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಬನ್ನಿ: ರೈಗೆ ಡಿವಿಎಸ್ ಸವಾಲು

11:08 AM Jul 15, 2017 | Team Udayavani |

ಬಂಟ್ವಾಳ: ಸ್ವಕ್ಷೇತ್ರದಲ್ಲಿ ಸ್ಪರ್ಧೆ ದೊಡ್ಡ ಸಾಧನೆಯಲ್ಲ, ಅನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ ಅದು ತಾಕತ್ತು. ಈ ಸವಾಲನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸ್ವೀಕರಿಸಲಿ. ಸ್ವತಃ ಬಂಟ್ವಾಳ ಕ್ಷೇತ್ರದಿಂದಲೇ  ಅವರು ಉಚ್ಚಾಟನೆಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

Advertisement

ಅವರು ಶುಕ್ರವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜತೆ ಮಾತನಾಡಿದರು. ರೈ ಕಾರಿಡಾರ್‌ !
ಅರಣ್ಯ ಸಚಿವನಾಗಿ ರಾಜ್ಯದ ಯಾವುದೇ ಭಾಗದಲ್ಲಿ ರೈ ಸಂಚರಿಸಿದ್ದು ನೋಡಿದ್ದೀರ ಎಂದು ಪ್ರಶ್ನಿಸಿದ ಸದಾನಂದ ಗೌಡರು, ಬೆಂಗಳೂರಿನ ಕ್ಯಾಬಿನೆಟ್‌ ಮೀಟಿಂಗ್‌ ಮತ್ತು ಬಂಟ್ವಾಳದ ಐಬಿಯಲ್ಲಿ ಮಾತ್ರ ಅವರನ್ನು ಕಾಣಬಹುದಾಗಿದೆ ಅವರಿಗೆ ಬೆಂಗಳೂರಿನಿಂದ ಬಂಟ್ವಾಳದವರೆಗೆ ಮಾತ್ರ ಕಾರಿಡಾರ್‌ ಎಂದು ಲೇವಡಿ ಮಾಡಿದರು. ನಾಚಿಕೆಗೇಡಿನ ಸಂಗತಿ ಪರಪ್ಪನ ಅಗ್ರಹಾರ ವಿಚಾರದಲ್ಲಿ ಡಿಐಜಿ ರೂಪಾ ಪತ್ರ ಬರೆದ ವಿಚಾರ ಪ್ರಸ್ತಾವಿಸಿದ ಡಿವಿಎಸ್‌, ಇದು ನಾಚಿಕೆ ಕೇಡಿನ ಸಂಗತಿ. ಪರಪ್ಪನ ಅಗ್ರಹಾರದಲ್ಲಿ ಘಟನೆ ನಡೆದರೂ ಸಿದ್ದರಾಮಯ್ಯನ ಹುಂಡಿಯಲ್ಲಿ ನಡೆದರೂ ಒಂದೇ ಎಂಬಂತಾಗಿದೆ. ರಾಜ್ಯ ಸರಕಾರವೂ ಇಂಥ ಘಟನೆಯಲ್ಲಿ ಭಾಗಿಯಾಗಿ, ಜನರಿಗೆ ತೊಂದರೆ ಉಂಟಾಗುತ್ತದೆ ಎಂದಾದರೆ ಕೇಂದ್ರ ಹಸ್ತಕ್ಷೇಪ ಮಾಡುತ್ತದೆ ಎಂದು ಹೇಳಿದರು.

ಬಿಜೆಪಿ ನೇತಾರ ರಾಜೇಶ್‌ ನಾಯ್ಕ ಉಳಿಪಾಡಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಸಂಜೀವ ಮಠಂದೂರು, ಎ. ರುಕ್ಮಯ ಪೂಜಾರಿ, ಬೃಜೇಶ್‌ ಚೌಟ, ಸುಲೋಚನಾ ಭಟ್‌, ಜಿ. ಆನಂದ, ಬಿ. ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next