Advertisement

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

01:16 PM May 20, 2022 | Team Udayavani |

ಮಾಗಡಿ : ಮಾಗಡಿ ಕಾಂಗ್ರೆಸ್ ನಲ್ಲಿ ಶೀತಲ ಸಮರ ಆರಂಭವಾಗಿದ್ದು, ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆಯುವ ಮೂಲಕ ಹೆಚ್.ಎಂ.ರೇವಣ್ಣ ವಿರುದ್ಧ ಬಹಿರಂಗ ಆಸಮಾಧಾನ ಹೊರ ಹಾಕಿದ್ದಾರೆ.

Advertisement

ಪತ್ರದಲ್ಲಿ ೨೫ ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಕೆಲವು ಕಾರಣಗಳಿಂದ ಜೆಡಿಎಸ್ ತೊರೆದಿದ್ದು ಗೊತ್ತೇ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದೇನೆ. ಕಾಯಾ,ವಾಚ ಮನಸ ದುಡಿಯುತ್ತಿದ್ದೇನೆ. ಹೆಚ್.ಎಂ.ರೇವಣ್ಣನವರು ಪಕ್ಷದಲ್ಲಿ ಹಿರಿಯರು. ಮಾಗಡಿ ಕ್ಷೇತ್ರದ ಮೇಲೆ ಅಭಿಮಾನ ಇರುವವರು. ಆದರೆ ಜೆಡಿಎಸ್ ಶಾಸಕರ ಬಗ್ಗೆ ಹೊಗಳಿಕೆ. ಪದೇ ಪದೇ ಕ್ಷೇತ್ರದಲ್ಲಿ‌ ಹೊಗಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾದುದು. ಅವರಿಗೆ ಮಾಗಡಿ ಮೇಲೆ ಆಸೆ ಇರಬಹುದು, ಹಾಗಾಗಿ ಅವರಿಗೆ ಟಿಕೆಟ್ ನೀಡಿ, ನಾನು ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಪತ್ರದಲ್ಲಿ ವ್ಯಂಗ್ಯವಾಗಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಸಿಎಂ ದಾವೋಸ್ ಪ್ರವಾಸ ಡೌಟು?; ಇಂದು ದಿಲ್ಲಿಗೆ ಹಠಾತ್ ಭೇಟಿ!

Advertisement

Udayavani is now on Telegram. Click here to join our channel and stay updated with the latest news.

Next