Advertisement

ನೀತಿ ಸಂಹಿತೆ: ಸಚಿವ ಪ್ರಮೋದ್ ಪ್ರಚಾರ ವಾಹನ ಸೀಜ್

02:19 PM Mar 28, 2018 | Team Udayavani |

ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಲ್ಲಿ  ಸಚಿವ ಪ್ರಮೋದ್‌ ಮಧ್ವರಾಜ್‌ ಪರ ಪ್ರಚಾರ ನಡೆಸುತ್ತಿದ್ದ ವಾಹನವನ್ನು ಬುಧವಾರ ಬೆಳಗ್ಗೆ ಸೀಜ್‌ ಮಾಡಲಾಗಿದೆ. 

Advertisement

ಉಡುಪಿಯ ಪ್ರವಾಸಿ ಬಂಗಲೆ ಬಳಿಯಿದ್ದ ವಾಹನವನ್ನು ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಮತ್ತು ಆರ್‌ ಐ ಸುಧಾಕರ್ ಶೆಟ್ಟಿ ಅವರು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ನಿನ್ನೆ  ಹೊರರಾಜ್ಯದಲ್ಲಿದ್ದ ಸಚಿವ ಪ್ರಮೋದ್‌ ಮಧ್ವರಾಜರು ಸರಕಾರಿ ಕಾರನ್ನು ವಾಪಸು ಮಾಡಲು ಸಿಬಂದಿಗೆ ಸೂಚಿಸಿದ್ದರು. 

ಅಭಿಮಾನಿಗಳು ಸಿದ್ದಪಡಿಸಿದ್ದ  ಪ್ರಚಾರ ವಾಹನದಲ್ಲಿ 2 ದಿನಗಳ ಹಿಂದಷ್ಟೆ ಕಾಂಗ್ರೆಸ್‌ ಚಿಹ್ನೆಯನ್ನು ಅಳವಡಿಸಲಾಗಿತ್ತು. ಕಾಂಗ್ರೆಸ್‌ ಚಿಹ್ನೆ, ಪಕ್ಷದ ನಾಯಕರ ಭಾವಚಿತ್ರಗಳಲ್ಲಿದೆ ಇದ್ದ ಕಾರಣ ಹಲವು ಉಹಾಪೋಹಗಳಿಗೆ ಕಾರಣವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next