Advertisement

ಕರಾವಳಿ ಬಹು ಸಂಸ್ಕೃತಿಯ ನಾಡು: ಪ್ರೊ|ವಿವೇಕ ರೈ

05:45 AM Jul 24, 2017 | Team Udayavani |

ಉಡುಪಿ: ಕರಾವಳಿಯ ವೈವಿಧ್ಯಮಯ, ರೊಮಾಂಚಕ ಮತ್ತು ಕ್ರಿಯಾತ್ಮಕ ಸ್ವಭಾವ, ಸಂಸ್ಕೃತಿ ಮತ್ತು ಸಂಪ್ರದಾಯಗಳ ನಡುವಿನ ಅಂತರ್‌ ಸಂಪರ್ಕದಿಂದಾಗಿ ಬಹು ಸಾಂಸ್ಕೃತಿಕತೆ ಈ ಪ್ರದೇಶದಲ್ಲಿ ಪ್ರಚಲಿತವಾಗಿದೆ ಎಂದು ಸಾಹಿತಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಉಪಕುಲಪತಿ ಪ್ರೊ| ಬಿ.ಎ. ವಿವೇಕ ರೈ ಹೇಳಿದರು.

Advertisement

ಮಣಿಪಾಲ ವಿ.ವಿ.ಯ ಸೆಂಟರ್‌ ಫಾರ್‌ ಕ್ರಿಯೇಟಿವ್‌ ಆ್ಯಂಡ್‌ ಕಲ್ಚರಲ್‌ ಸ್ಟಡೀಸ್‌ ವತಿಯಿಂದ ಇಂಡಿಯನ್‌ ಕೌನ್ಸಿಲ… ಫಾರ್‌ ಹಿಸ್ಟಾರಿಕಲ… ರಿಸರ್ಚ್‌ ಸಹಯೋಗದಲ್ಲಿ “ಭಾರತಿಯ ಕಲೆ ಮತ್ತು ಕಲಾ ಇತಿಹಾಸ: ಕರಾವಳಿ ಸಂಸ್ಕೃತಿ ಮತ್ತು ಕಲಾ ಪ್ರಕಾರಗಳು’ ಎನ್ನುವ ವಿಷಯದ ಕುರಿತು ಶನಿವಾರ ಕೆಎಂಸಿಯ ಇಂಟರಾಕ್ಟ್ ಹಾಲ…ನಲ್ಲಿ ನಡೆದ ವಿಚಾರ ಸಂಕಿರಣ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಸಹಕುಲಪತಿ ಪ್ರೊ| ಪೂರ್ಣಿಮಾ ಬಾಳಿಗಾ ಮಾತನಾಡಿ, ಎಲ್ಲ ರೀತಿಯ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮಲ್ಲಿ ರುವ ಒತ್ತಡವನ್ನು ನಿವಾರಿಸಲು ಸಾಧ್ಯ. ಮಕ್ಕಳಿಗಂತೂ ಬಹಳಷ್ಟು ಸಹಕಾರಿ. ಲಲಿತಕಲೆ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಸ್ಕೃತಿ ಅಧ್ಯಯನ, ಲಲಿತಕಲೆ ಹಾಗೂ ಇತರ ಅಂತರ್‌ ಶಾಸ್ತ್ರೀಯ ಶಿಕ್ಷಣ (ಸಂಗೀತ, ನೃತ್ಯ, ನಾಟಕ, ದೃಶ್ಯಕಲೆ, ಕಲಾ ಇತಿಹಾಸ, ಸಂಸ್ಕೃತಿ ಮತ್ತು ಸಂಜೆ, ಜಾನಪದ, ಕಲೆ ಮತ್ತು ವಿನ್ಯಾಸ, ಇತಿಹಾಸ) ವಿಷಯಗಳ ಅಧ್ಯಯನಕ್ಕಾಗಿ ಪಿಎಚ್‌ಡಿ ಸಂಶೋಧನಾ ಕೇಂದ್ರವನ್ನು ಸಿಸಿಸಿಎಸ್‌ ಮುಂದಿನ ವರ್ಷದಿಂದ ಆರಂಭಿಸಲಿದೆ ಎಂದರು.

ಚಿತ್ರಕಲಾ ಪ್ರದರ್ಶನದ ಕೈಪಿಡಿಗ ಳನ್ನು ಬಿಡುಗಡೆಗೊಳಿಸಲಾಯಿತು. ಎಂಜಿನಿಯರಿಂಗ್‌ ಮತ್ತು ವಾಣಿಜ್ಯ ವಿದ್ಯಾರ್ಥಿಗಳ ಆರ್ಟ್‌ ಅಪ್ರಿಸಿಯೇಶನ್‌ ಕೋರ್ಸ್‌ಗೆ ಚಾಲನೆ ನೀಡಲಾಯಿತು. ಯಕ್ಷಗಾನ ಕುರಿತು ಡಾ| ಪ್ರಭಾಕರ ಜೋಶಿ, ಪ್ರೊ| ಎಂ.ಎಲ…. ಸಾಮಗ, ಡಾ| ರಾಘವ ನಂಬಿಯಾರ್‌, ಜಾನಪದ ಕ್ಷೇತ್ರದ ಬಗ್ಗೆ ಡಾ| ಅಶೋಕ್‌ ಆಳ್ವ, ಡಾ| ಎಸ್‌.ಎ. ಕೃಷ್ಣಯ್ಯ, ಶರಿತಾ ಹೆಗ್ಡೆ ಅವರಿಂದ ಉಪನ್ಯಾಸ ನಡೆಯಿತು.

ಸೆಂಟರ್‌ ಫಾರ್‌ ಗಾಂಧಿಯನ್‌ ಆ್ಯಂಡ್‌ ಪೀಸ್‌ ಸ್ಟಡೀಸ್‌ ನಿರ್ದೇಶಕ ಪ್ರೊ| ವರದೇಶ್‌ ಹಿರೇಗಂಗೆ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಚಾಲಕ ಡಾ| ಕೆ. ಉಣ್ಣಿಕೃಷ್ಣನ್‌ ಕಾರ್ಯಕ್ರಮ ನಿರ್ವಹಿಸಿದರು. ಸುಶ್ಮೀತಾ ಎ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next