Advertisement

ಶ್ರಾವಣ ಮುಗಿದು ಕಾರ್ತಿಕ ಬಂದರೂ ಸಮ್ಮಿಶ್ರ ಸರ್ಕಾರ ಭದ್ರ:ಡಿಸಿಎಂ ಪರಂ 

02:08 PM Aug 28, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು  5 ವರ್ಷಗಳನ್ನು ಪೂರ್ಣ ಗೊಳಿಸುತ್ತದೆ ಅದಕ್ಕೆ ಯಾರಿಗೂ ಅನುಮಾನ ಬೇಡ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಶ್ರಾವಣದ ಕೊನೆಯ ಸೋಮವಾರ ಯಡಿಯೂರಪ್ಪ  ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ’ ಎನ್ನುವ ಪ್ರಶ್ನೆಗೆ ಉತ್ತರಿಸಿ ‘ಶ್ರಾವಣ ಇನ್ನೂ ಎರಡು ವಾರ ಇದೆಯಲ್ಲ ನೀವು ಕಾದು ನೋಡಿ’ ಎಂದರು. 

‘ಸರ್ಕಾರದಲ್ಲಿ  ಅಭದ್ರತೆ ಕಾಣಿಸುತ್ತಿಲ್ಲ ,ಆದರೆ ರಾಜಕೀಯ ಬೆಳವಣಿಗೆಗಳು ಆಗಾಗ ಆಗುತ್ತಿರುತ್ತವೆ’ ಎಂದರು. 

‘ಶ್ರಾವಣ ಆದ ಮೇಲೆ ಭಾದ್ರಪದ ಬರುತ್ತದೆ ನಂತರ ಕಾರ್ತಿಕ ಬರುತ್ತದೆ ಸರ್ಕಾರ ಸ್ಥಿರವಾಗಿರುತ್ತದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next