Advertisement

Revanna..ನಿಂಬೆಹಣ್ಣು ಹಿಡ್ಕೊಳ್ಳೋ ಕೈಯಲ್ಲಿ ಕೊಬ್ಬರಿ ಯಾಕೆ?; ಸಿಎಂ ಸಿದ್ದರಾಮಯ್ಯ ಹಾಸ್ಯ

05:10 PM Jul 13, 2023 | Team Udayavani |

ವಿಧಾನಸಭೆ : ಗುರುವಾರದ ಕಲಾಪದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ರೇವಣ್ಣ ಅವರು ಕೊಬ್ಬರಿ ಹಿಡಿದುಕೊಂಡು ಆಗಮಿಸಿ ಸದನದ ಗಮನ ಸೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿ, ರೇವಣ್ಣ, ನಿಂಬೆ ಹಣ್ಣು ಹಿಡ್ಕೊಳ್ಳೋ ಕೈಯಲ್ಲಿ ಕೊಬ್ಬರಿ ಯಾಕೆ ಎಂದು ಪ್ರಶ್ನಿಸಿದಾಗ ಸದನ ನಗೆಗಡಲಲ್ಲಿ ತೇಲಿತು.

Advertisement

ರೇವಣ್ಣ ಅವರು ಕೊಬ್ಬರಿಗೆ ಬೆಂಬಲ ಬೆಲೆ ಕುರಿತಾಗಿ ನಿರಂತರವಾಗಿ ಸದನದ ಗಮನ ಸೆಳೆಯುತ್ತಿದ್ದರು.  ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲು ಮುಂದಾದಾಗ ರೇವಣ್ಣ ಅವರು ಕೊಬ್ಬರಿ ಬೆಲೆ ಏರಿಕೆ ಮಾಡಬೇಕು. 15,000 ರೂ.ಗೆ ಏರಿಕೆ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯ ಪ್ರವೇಶಿಸಿ ಮಾತನಾಡಿ ಕನಿಷ್ಠ ರೇವಣ್ಣ ಅವರಿಗಾದರೂ ಕೊಬ್ಬರಿ ದರ ಏರಿಕೆ ಮಾಡಬೇಕು ಎಂದರು. ಸದನ ಸಮಸ್ಯೆ ವಿಚಾರದಲ್ಲೂ ಹಾಸ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next