Advertisement

“ಸಿಎಂ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲಿ’

11:49 PM Aug 19, 2019 | Team Udayavani |

ಮೂಡಿಗೆರೆ: “ಯಡಿಯೂರಪ್ಪನವರೇ, ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ. ವ್ಯಾಪಾರ ಮಾಡಲು ಬಿಡಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Advertisement

ಸೋಮವಾರ ನೆರೆ ಸಂತ್ರಸ್ತರನ್ನು ಭೇಟಿ ಮಾಡಲು ತಾಲೂಕಿನ ವಿವಿಧ ಭಾಗಗಳಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿಮ್ಮ ಮಕ್ಕಳನ್ನು ವ್ಯಾಪಾರ ಮಾಡಲು ಬಿಟ್ಟರೆ 2010ರಲ್ಲಿ ನಡೆದ ಘಟನೆ ಪುನರಾವರ್ತನೆಯಾಗಲಿದೆ. ಎಚ್ಚರ ವಹಿಸಿಕೊಳ್ಳಿ ಎಂದು ಯಡಿಯೂರಪ್ಪ ಅವರಿಗೆ ಹೇಳಿದರು.

ಮುಖ್ಯಮಂತ್ರಿಯಾಗಿ ನೀವು ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆ ಹೊರತು, ನಿಮಗೆ ಆಪ್ತರಾದ ರಘುಪತಿ ಎನ್ನುವ ಅಧಿ ಕಾರಿಯನ್ನು ಹಾಕಿಕೊಂಡು ಕೃಷ್ಣಾ ಕಚೇರಿಯನ್ನು ಮಾರ್ಕೆಟ್‌ ದಂಧೆ ಮಾಡಲು ಬಳಸಿಕೊಳ್ಳುತ್ತಿದ್ದೀರಿ. ಈ ರೀತಿಯ ದಂಧೆಯನ್ನು ನನ್ನ ಮಗನ ಕೈಯಲ್ಲಿ ಮಾಡಿಸಿಲ್ಲ. ನಾವು ಮರ್ಯಾದೆಯಿಂದ ಬದುಕಿದವರು ಎಂದು ಚಾಟಿ ಬೀಸಿದರು.

ಸರ್ಕಾರ ಬೀಳಿಸಲು ಸಮಾಜಘಾತಕ ಶಕ್ತಿಗಳ ಜತೆ ಹೊಂದಾಣಿಕೆ ಮಾಡಿಕೊಂಡು ಈಗ ಲೀಡ್‌ ತೋರಿಸ್ತಾ ಇದೀರಾ? ನಾನು ಸಾವಿರ ಬಾರಿ ಟ್ವೀಟ್‌ ಮಾಡಬಲ್ಲೆ. ನಾನು ಯಾವ ರೀತಿ ಬದುಕಬೇಕೆಂಬುದು ನಿಮ್ಮಿಂದ ಕಲಿಯಬೇಕಾಗಿಲ್ಲ. ಸುಮ್ಮನೆ ಟ್ವೀಟ್‌ ಮಾಡುವುದನ್ನು ಬಿಟ್ಟು ಮರ್ಯಾದೆಯಿಂದ ಬದುಕಿ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next