Advertisement

Karnataka Election ಪ್ರಚಾರಕ್ಕಿಳಿದ ಗೋವಾ ಸಿಎಂ ಪ್ರಮೋದ ಸಾವಂತ್,ಸಚಿವ ವಿಶ್ವಜಿತ್ ರಾಣೆ

04:16 PM Apr 18, 2023 | Team Udayavani |

ಪಣಜಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆ  ಹಾಗೂ ರಾಜ್ಯದ ಕೆಲವು ಪ್ರಮುಖ ಬಿಜೆಪಿ ನಾಯಕರು ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ.

Advertisement

ಆರೋಗ್ಯ ಸಚಿವ ವಿಶ್ವಜೀತ್ ರಾಣೆ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಸಚಿವ ವಿಶ್ವಜಿತ್ ರಾಣೆ ರವರು ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಮತದಾರರನ್ನುದ್ದೇಶಿಸಿ  ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಿದರು. ಈ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಿಶ್ವಜಿತ್ ರಾಣೆ ರವರು ನಿರರ್ಗಳವಾಗಿ ಕನ್ನಡದಲ್ಲಿ ಭಾಷಣ ಮಾಡುತ್ತಿರುವುದನ್ನು ಕಂಡು ಗೋವಾದ ಜನತೆ ಆಶ್ಚರ್ಯಚಕಿತರಾಗಿದ್ದಾರೆ. ಕಾರವಾರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಕಾರವಾರದಲ್ಲಿ ಬೃಹತ್ ರೋಡ್ ಶೊ ನಡೆಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು  ಮತದಾನ ನಡೆಯಲಿದೆ. ಅದಕ್ಕಾಗಿ ಎಲ್ಲ ಪಕ್ಷಗಳೂ ಪ್ರಚಾರದಲ್ಲಿ ನಿರತವಾಗಿವೆ. ಗೋವಾದ ಸಚಿವರೂ ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ಆರಂಭಿಸಿದ್ದಾರೆ. ‘ಯುವಕರ ಕೈಗೆ ಉದ್ಯೋಗ ಸಿಗಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯನ್ನು ಗೆಲ್ಲಿಸಿ’ ಎಂದು ಗೋವಾ ರಾಜ್ಯ ಆರೋಗ್ಯ  ಸಚಿವ ವಿಶ್ವಜಿತ್ ರಾಣೆ ಹಳಿಯಾಳ-ಜೋಯ್ಡಾ ಕ್ಷೇತ್ರದಲ್ಲಿ ಕನ್ನಡದಲ್ಲಿ  ಭಾಷಣ ಮಾಡಿ ಮನವಿ ಮಾಡಿದರು. ಈ ವೀಡಿಯೊ ಸದ್ಯ ಗೋವಾ ರಾಜ್ಯಾಧ್ಯಂತ ಭಾರಿ ಸದ್ಧು ಮಾಡುತ್ತಿದೆ. ಮಹದಾಯಿ ನದಿ ನೀರನ್ನು ಬಿಜೆಪಿಯು ಕರ್ನಾಟಕಕ್ಕೆ ಮಾರಾಟ ಮಾಡಿದೆ ಎಂದು ಕಾಂಗ್ರೇಸ್ ಪಕ್ಷ ಆರೋಪದ ಸುರಿಮಳೆಗೈದಿದೆ.

ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರ ಪತ್ನಿ ಸುಲಕ್ಷಣ ಸಾವಂತ್  ಅವರು ಕರ್ನಾಟಕದ ಖಾನಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಠ್ಠಲ್ ಹಾಲ್ಗೇಕರ್ ಪರ ಪ್ರಚಾರ ಮಾಡಿದ್ದರು; ಮುಖ್ಯಮಂತ್ರಿಗಳು ಕಳೆದೊಂದು ತಿಂಗಳಲ್ಲಿ ಕರ್ನಾಟಕದ ವಿವಿಧ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next