Advertisement

ಮಣಿಪಾಲ ಉದಯವಾಣಿ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ

09:31 PM Apr 11, 2022 | Team Udayavani |

ಉಡುಪಿ: ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

Advertisement

ಅತಿಥಿ ಸಂಪಾದಕರಾಗಿ ಆಗಮಿಸಿದ ಸಿಎಂ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಉದಯವಾಣಿ ಈ ಭಾಗದ ಜನರ ಧ್ವನಿಯಾಗಿದೆ. ಕರಾವಳಿ ಕರ್ನಾಟಕದಿಂದ ಪ್ರಾರಂಭವಾಗಿ ಇಡೀ ಕರ್ನಾಟಕವನ್ನು ವ್ಯಾಪಿಸಿದೆ. ಎಲ್ಲರ ಮನೆಯ ಮಾತಾಗಿದೆ, ಮನದ ಮಾತಾಗಿದೆ ಎಂದರು.

ಪತ್ರಿಕೆಯ ವೈಶಿಷ್ಟ್ಯತೆಯ ಗುಟ್ಟು ವೈಶಿಷ್ಟ್ಯ ಸಂಪಾದಿಸಬೇಕು, ನಾನು ಪತ್ರಿಕೆ ನಡೆಸುತ್ತಿಲ್ಲ.ಆದರೆ ನಾನೊಬ್ಬ ಒಳ್ಳೆಯ ಓದುಗ, ಉದಯವಾಣಿ ವಸ್ತು ನಿಷ್ಠ ವರದಿ ನೀಡುತ್ತದೆ, ಈಗ ಹಲವಾರು ಪತ್ರಿಕೆಗಳಿವೆ. ಓದುಗರಿಗೆ ಬಹಳ ಆಯ್ಕೆಗಳಿವೆ. ಓದುಗ ವಿಶ್ವಾಸ ಉಳಿಸಿಕೊಂಡ ಪತ್ರಿಕೆ ಯ ಮೇಲೆ ಅವಲೋಕನ ಮಾಡಬಹುದಾಗಿದೆ. ಉದಯವಾಣಿ ವರದಿಗಳಲ್ಲಿ ಪರ ವಿರೋಧವಿಲ್ಲದ ವರದಿಗಳನ್ನು ಕಾಣಬಹುದಾಗಿದೆ ಎಂದರು.

ವಿಭಿನ್ನ ವಿಶ್ಲೇಷಣೆ ಸತ್ಯವನ್ನು ಹೇಳಬೇಕು, ವಸ್ತು ನಿಷ್ಠವಾಗಿರಬೇಕು, ಅತ್ಯಂತ ಅಮೂಲ್ಯವಾಗಿ ಹೊರ ಹೊಮ್ಮಿದ ಪತ್ರಿಕೆ ಉದಯವಾಣಿ. ೫೦ ವರ್ಷ ಪತ್ರಿಕೆ ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ.ನಿಮ್ಮದೇ ಆದ ಛಾಪನ್ನು ಪತ್ರಿಕಾ ರಂಗದಲ್ಲಿ ಮೂಡಿಸಿದ್ದೀರಿ ಎಂದರು.

ರಾಷ್ಟ್ರ ಮೆಚ್ಚಿದ ಬನ್ನಂಜೆ ಗೋವಿಂದ ಆಚಾರ್ಯ ಅಂತಹ ತತ್ವಜ್ಞಾನಿಗಳು ಇಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದು ಪತ್ರಿಕೆಯ ಗುಣಮಟ್ಟ ತೋರಿಸುತ್ತದೆ ಎಂದರು.

Advertisement

ಉದಯವಾಣಿ ಸುದ್ದಿಕೊಡುವ ಮಾಧ್ಯಮ ಅಲ್ಲ ಮಾರ್ಗದರ್ಶನ ಮಾಡುವ ಮಾಧ್ಯಮ . ನಾನು ಉದಯವಾಣಿಯ ವರದಿಗಳನ್ನು ನೋಡಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದೇನೆ ಎಂದರು.

ರಾಜಕಾರಣಿ ಮಾಧ್ಯಮ ಇಲ್ಲದೆ ಬೆಳೆಯಲು ಸಾಧ್ಯವಿಲ್ಲ, ಅಂತೆಯೇ ಮಾಧ್ಯಮಕ್ಕೂ ರಾಜಕಾರಣಿಗಳ ಅವಶ್ಯಕತೆ ಇದೆ. ನಮಗೆ ಅವಿನಾಭಾವ ಸಂಬಂಧ ಇದೆ. ಟೀಕೆ ಮಾಡಿದಾಗ ಸಮನಾಗಿ ತೆಗೆದುಕೊಂಡು ಹೋಗಬೇಕು. ನಾವು ಹೇಳಿದ್ದನ್ನ ಪ್ರಕಟ ಮಾಡಿ ನಮ್ಮ ಅಭಿಪ್ರಾಯ ಜನರಿಗೆ ತಲುಪಿಸುವ ಕಾರ್ಯ ಆಗಬೇಕು, ಹಾಗಾದಾಗ ಆರೋಗ್ಯಕರವಾದ ಸಮಾಜ ನಿರ್ಮಾಣ ಆಗುತ್ತದೆ. ಉದಯವಾಣಿಯಿಂದ ಕರ್ನಾಟಕದ ಉದಯವಾಗಲಿ ಎಂದರು.

ಉದಯವಾಣಿ ಸಂಸ್ಥೆಯ ಪರವಾಗಿ ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಪೈ, ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್ . ಪೈ, ಮಣಿಪಾಲ ಟೆಕ್ನಾಲಜಿಸ್‌ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಗೌತಮ್‌ ಪೈ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ನ ಸಿಇಒ& ಎಂಡಿ ವಿನೋದ್ ಕುಮಾರ್, ಸಂಪಾದಕರಾದ ಅರವಿಂದ ನಾವಡ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.

ಸಿಎಂ ಜತೆಯಲ್ಲಿ ಸಚಿವರಾದ ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿ ಹಿರಿಯ ಅಧಿಕಾರಿಗಳು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next