Advertisement

18 ರಿಂದ 25 ಚಿತ್ರೀಕರಣ ಮುಕ್ತಾಯ

04:42 PM Dec 06, 2017 | |

ಈ ಹಿಂದೆ “ತೂಫಾನ್‌’ ಹಾಗೂ “ಬಳ್ಳಾರಿ ದರ್ಬಾರ್‌’ ಚಿತ್ರಗಳನ್ನು ನಿರ್ದೇಶಿಸಿದ್ದ  ಸ್ಮೈಲ್‌ ಶ್ರೀನು ಈ ಬಾರಿ ವಿಶೇಷ ಕಥಾನಕವನ್ನು ತೆಗೆದುಕೊಂಡು “18 ರಿಂದ 25′ ಎಂಬ ಚಿತ್ರ ಚಿತ್ರೀಕರಿಸಿದ್ದಾರೆ. ಈಗಾಗಲೇ ಸಂಪೂರ್ಣ ಚಿತ್ರೀಕರಣಗೊಂಡಿರುವ “18 ರಿಂದ 25′ ಚಿತ್ರದಲ್ಲಿ ಹರೆಯದ ಹೃದಯಗಳ ಮಿಡಿತದ ಕುರಿತು ಹೇಳಲಾಗಿದೆ.

Advertisement

ಈಗಾಗಲೇ ಬಳ್ಳಾರಿ, ಸಂಡೂರು, ಜಿಂದಾಲ್‌ ಹಾಗೂ ಚಿತ್ರದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದುರ್ಗದ ಗಾಯಿತ್ರಿ ಶಾರದ ದೇವಸ್ಥಾನದಲ್ಲಿ ನಾಯಕ ಅಭಿರಾಮ್‌, ಅಖೀಲ, ಋಷಿತೇಜ, ವಿದ್ಯಾ ಅಭಿನಯದ “ರಂಗು ಚೆಲ್ಲಿ ರಂಗು ಚೆಲ್ಲಿ ಬರೆದಂತೆ ರಂಗವಲ್ಲಿ’ ಎಂಬ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರೀಕರಣ ಮುಕ್ತಾಯಗೊಂಡಿದೆ.

ಲಕ್ಷ್ಮೀಪ್ರಿಯ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ತಮ್ಮಲಪಲ್ಲಿ ರಾಮ ಸತ್ಯನಾರಾಯಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್‌ ಅರ್ಜುನ್‌ ಸಂಗೀತ ನೀಡಿದ್ದಾರೆ. ಶಿವ ಕೆ. ನಾಯ್ಡು ಛಾಯಾಗ್ರಹಣವಿದೆ. ಬಿ. ಮಲ್ಲಿ ಸಂಕಲನ ಮಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್‌ ಗೀತೆಗಳನ್ನು ರಚಿಸಿದ್ದಾರೆ.

ವಯಲೆನ್ಸ್‌ ವೇಲು, ಸಾಹಸ ನಿರ್ದೇಶನ ಮಾಡಿದರೆ, ಚಿರಂಜೀವಿ ನೃತ್ಯ ನಿರ್ದೇಶನವಿದೆ. ಅಭಿರಾಮ್‌, ಋಷಿ ತೇಜ, ಅಖೀಲಾ, ವಿದ್ಯಾಶ್ರೀ, ಫಾರೂಕ್‌ ಖಾನ್‌, ನಾಗ ಶೇಖರ್‌, ಉದಯ ಭಾಸ್ಕರ್‌, ರವಿರಾಮ್‌, ಪೋಲಾ ಶ್ರೀನಿವಾಸ ಬಾಬು, ರಾಕ್‌ ಲೈನ್‌ ಸುಧಾಕರ್‌, ಮಿಮಿಕ್ರಿ ಗೋಪಿ, ಸೌಮ್ಯ, ಕುಮಾರ್‌ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next