Advertisement

ʼJigarthanda Double Xʼ ಸಿನಿಮಾ ನೋಡುತ್ತೇನೆ: ಹಾಲಿವುಡ್‌ ನಟ ಈಸ್ಟ್‌ವುಡ್ ಟ್ವೀಟ್‌ ವೈರಲ್

11:10 AM Dec 14, 2023 | Team Udayavani |

ಚೆನ್ನೈ: ಕಾಲಿವುಡ್ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ʼಜಿಗರ್ತಾಂಡ ಡಬಲ್ ಎಕ್ಸ್ʼ ಸಿನಿಮಾದ ಮೂಲಕ ಮತ್ತೆ ವಿನ್ನಿಂಗ್‌ ಟ್ರ್ಯಾಕ್‌ ಗೆ ಮರಳಿದ್ದಾರೆ. ಥಿಯೇಟರ್‌ ನಲ್ಲಿ ಭರ್ಜರಿ ಪ್ರದರ್ಶನ ಕಂಡ ಬಳಿಕ, ಬಾಕ್ಸ್‌ ಆಫೀಸ್‌ ನಲ್ಲಿ ಒಳ್ಳೆ ಕಮಾಯಿ ಮಾಡಿ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್‌ ಆಗಿದೆ.

Advertisement

ʼಜಿಗರ್ತಾಂಡ ಡಬಲ್ ಎಕ್ಸ್ʼ ಸಿನಿಮಾ ಗ್ಯಾಂಗ್‌ ಸ್ಟರ್‌ ಕಥಾಹಂದರವನ್ನು ಒಳಗೊಂಡಿದ್ದು,  ರಾಘವ್‌ ಲಾರೆನ್ಸ್‌ , ಎಸ್ ಜೆ ಸೂರ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸ್ವತಃ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಸಿನಿಮಾ ಮೆಚ್ಚಿ ಚಿತ್ರತಂಡಕ್ಕೆ ಪತ್ರ ಬರೆದಿದ್ದರು.

ʼಜಿಗರ್ತಾಂಡ ಡಬಲ್ ಎಕ್ಸ್ʼ ಸಿನಿಮಾದ ಕಥೆಯಲ್ಲಿ ಹಾಲಿವುಡ್‌ ದಿಗ್ಗಜ ನಟ, ನಿರ್ದೇಶಕ ಕ್ಲಿಂಟ್ ಈಸ್ಟ್‌ವುಡ್ ಮತ್ತು ಭಾರತದ ಲೆಜೆಂಡರಿ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಗೌರವಯುತವಾಗಿ ಕಥೆಯಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗಿದೆ.

ತಮಿಳು ಸಿನಿಮಾದ ಅಭಿಮಾನಿಯೊಬ್ಬ ʼಜಿಗರ್ತಾಂಡ ಡಬಲ್ ಎಕ್ಸ್ʼ ವೀಕ್ಷಿಸಿ ಟ್ವಿಟರ್‌ (ಎಕ್ಸ್)‌ ನಲ್ಲಿ ದಿಗ್ಗಜ ನಟ, ನಿರ್ದೇಶಕ ಕ್ಲಿಂಟ್ ಈಸ್ಟ್‌ವುಡ್ ಸಿನಿಮಾ ನೋಡುವಂತೆ ಹೇಳಿದ್ದು, ಈ ಟ್ವೀಟ್‌ ಗೆ ಈಸ್ಟ್‌ ವುಡ್‌ ಅವರು ಪ್ರತಿಕ್ರಿಯೆ ನೀಡಿರುವುದು ವೈರಲ್‌ ಆಗಿದೆ.

ವಿಜಯ್‌ ಎನ್ನುವಾತ ಟ್ವಿಟರ್‌ ನಲ್ಲಿ” ಕ್ಲಿಂಟ್ ಈಸ್ಟ್‌ವುಡ್ ಅವರೇ ನಾವು ಭಾರತೀಯರು ನಾವು ʼಜಿಗರ್ತಾಂಡ ಡಬಲ್ ಎಕ್ಸ್ʼ ಎಂಬ ತಮಿಳು ಚಲನಚಿತ್ರವನ್ನು ಮಾಡಿದ್ದೇವೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಇಡೀ ಸಿನಿಮಾದಲ್ಲಿ ನಾವು ನಿಮಗೆ ದೊಡ್ಡ ಗೌರವವನ್ನು ನೀಡಿದ್ದೇವೆ. ನಿಮ್ಮ ಚಿಕ್ಕ ವಯಸ್ಸಿನ ಫೋಟೋಗಳನ್ನು ನಾವು ಅನಿಮೇಟೆಡ್ ದೃಶ್ಯಗಳೊಂದಿಗೆ ತೋರಿಸಿದ್ದೇವೆ. ದಯವಿಟ್ಟು ಸ್ವಲ್ಪ ಸಮಯ ಸಿಕ್ಕರೆ ಒಮ್ಮೆ ನೋಡಿ” ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಸಾಮಾನ್ಯ ಟ್ವೀಟ್‌ ಎಂದು ಎಲ್ಲರೂ ಸುಮ್ಮನಾಗಿದ್ದರು. ಆದರೆ ಈ ಟ್ವೀಟ್‌ ಪ್ರತಿಕ್ರಿಯೆಯಾಗಿ ಹಾಲಿವುಡ್‌ ದಿಗ್ಗಜ ಕ್ಲಿಂಟ್ ಈಸ್ಟ್‌ವುಡ್ ಅವರೇ ರಿಪ್ಲೈ ನೀಡಿರುವುದು ಎಲ್ಲರಿಗೆ ಅಚ್ಚರಿಯಾಗಿದೆ.

“ಹಾಯ್. ಕ್ಲಿಂಟ್ ಈ ಸಿನಿಮಾದ ಬಗ್ಗೆ ತಿಳಿದಿದ್ದಾರೆ. ತಮ್ಮ ಹೊಸ ಸಿನಿಮಾ ಜೂರರ್ 2 ಪೂರ್ಣಗೊಳಿಸಿದ ಬಳಿಕ, ಅದನ್ನು (ʼಜಿಗರ್ತಾಂಡ ಡಬಲ್ ಎಕ್ಸ್ʼ) ನೋಡುತ್ತೇನೆ. ಥ್ಯಾಂಕ್ಯೂ” ಎಂದು ಟ್ವೀಟ್‌ ಗೆ ರಿಪ್ಲೈ ಬಂದಿದೆ.

ಕ್ಲಿಂಟ್ ಈಸ್ಟ್‌ವುಡ್ ಅವರ ರಿಪ್ಲೈ ಬಳಿಕ ‘ಜಿಗರ್ತಾಂಡ 2’ ಅಭಿಮಾನಿಗಳು ಇದು ಕಾರ್ತಿಕ್ ಸುಬ್ಬರಾಜ್ ಮತ್ತು ತಂಡಕ್ಕೆ ದೊಡ್ಡ ಗೆಲುವು ಎಂದು ಹೇಳಿದ್ದಾರೆ.

ತಮ್ಮ ʼಜಿಗರ್ತಾಂಡ ಡಬಲ್ ಎಕ್ಸ್ ಸಿನಿಮಾ ಪಾಶ್ಚಿಮಾತ್ಯ ಚಲನಚಿತ್ರಗಳಿಗೆ ಮತ್ತು ಹಾಲಿವುಡ್ ಸ್ಟಾರ್ ಕ್ಲಿಂಟ್ ಈಸ್ಟ್‌ವುಡ್‌ ಹಾಗೂ ನಿರ್ದೇಶಕ ಸತ್ಯಜಿತ್‌ ರೇ ಅವರಿಗೆ ಗೌರವವಾಗಿದೆ ಎಂದು ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next