Advertisement

ಪಾಲಿಕೆ ಆವರಣದಲ್ಲಿದ್ದ ನಿರುಪಯುಕ್ತ ವಸ್ತು ತೆರವು

12:06 PM Dec 10, 2022 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ಆವರಣದಲ್ಲಿ ರಾಶಿ ಹಾಕಲಾಗಿದ್ದ ನಿರುಪಯುಕ್ತ ವಸ್ತುಗಳನ್ನು ತೆರವು ಮಾಡಲಾಗಿದೆ.

Advertisement

ಪಾಲಿಕೆ ಹಿಂಭಾಗದಲ್ಲಿ ಈ ಹಿಂದೆ ಗುಜರಿ ಕಾರು, ಫ್ಲೆಕ್ಸ್‌, ಪೀಠೊಪಕರಣ, ಕಬ್ಬಿಣ ಸಹಿತ ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕಲಾಗಿತ್ತು. ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಬಳಸುತ್ತಿದ್ದ ಹಳೆ ವಾಹನಗಳು ಪಾಲಿಕೆ ಹಿಂಬದಿಯ ವಾಹನ ನಿಲುಗಡೆ ಪ್ರದೇಶದಲ್ಲಿ ಅಡ್ಡಾ ದಿಡ್ಡಿ ಬಿದ್ದಿತ್ತು. ಇದರ ಹೊರತಾಗಿಯೂ ಕೆಲವೊಂದು ಅಪಘಾತವಾದ ವಾಹನ ಮತ್ತು ಗುಜರಿ ವಾಹನಗಳನ್ನು ಯಾವುದೋ ಕಾರಣಕ್ಕೆ ಅಲ್ಲಿ ಇಡಲಾಗಿತ್ತು.

ಈ ವಾಹನಗಳನ್ನು ವಿಲೇವಾರಿ ಮಾಡುವತ್ತ ಮಹಾನಗರ ಪಾಲಿಕೆ ಹಲವು ತಿಂಗಳಿನಿಂದ ಕ್ರಮ ಕೈಗೊಂಡಿರಲಿಲ್ಲ. ಈ ಕುರಿತು “ಉದಯವಾಣಿ ಸುದಿನ’ ಕೆಲವು ದಿನಗಳ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಮೇಯರ್‌ ಜಯಾನಂದ ಅಂಚನ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸ್ವತ್ಛತೆಯ ಬಗ್ಗೆ ಸೂಚನೆ ನೀಡಿದ್ದರು. ಎಚ್ಚೆತ್ತ ಪಾಲಿಕೆ ಟೆಂಡರ್‌ ಕರೆದಿದ್ದು, ಇದೀಗ ನಿರುಪಯುಕ್ತ ವಸ್ತುಗಳ ವಿಲೇವಾರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next