Advertisement

SatyaSai ಗ್ರಾಮದಲ್ಲಿ ಕ್ರಿಕೆಟ್ ದಿಗ್ಗಜರ ಕಾಳಗ: ಸಾಯಿ ಕೃಷ್ಣ ಕ್ರೀಡಾಂಗಣ ಲೋಕಾರ್ಪಣೆ

11:17 AM Jan 18, 2024 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ಉದ್ಘಾಟನೆಗೊಂಡ ಸಾಯಿ ಕೃಷ್ಣ ಕ್ರಿಕೆಟ್ ಕ್ರೀಡಾಂಗಣದ ನೆನಪಿಗಾಗಿ ಒಂದು ಜಗತ್ತು ಒಂದು ಕುಟುಂಬ ಘೋಷಣೆಯಡಿ ಆಯೋಜಿಸರುವ ಒಂದು ಕಪ್ ಪಂದ್ಯಾವಳಿಗೆ ಭರ್ಜರಿ ಚಾಲನೆ ಸಿಕ್ಕಿದೆ.

Advertisement

ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವ ಎರಡು ತಂಡಗಳಲ್ಲಿ 7 ರಾಷ್ಟ್ರಗಳ 24 ಆಟಗಾರರು ಪಾಲ್ಗೊಂಡಿದ್ದಾರೆ. ಯುವರಾಜ್ ಸಿಂಗ್ ನಾಯಕತ್ವದ ತಂಡವು ಮೊದಲು ಬ್ಯಾಟಿಂಗ್ ನಡೆಸುತ್ತಿದೆ.

ಹರ್ಭಜನ್ ಸಿಂಗ್, ಮುತ್ತಯ್ಯ ಮುರಳೀಧರನ್, ಆರ್.ಪಿ.ಸಿಂಗ್, ಎನ್.ವೆಂಕಟೇಶ್ ಪ್ರಸಾದ್, ಯುಸೂಫ್ ಪಠಾಣ್,  ಇರ್ಫಾಣ್ ಪಠಾಣ್, ಪಾರ್ಥಿವ್ ಪಟೇಲ್ , ಮೊಹಮ್ಮದ್ ಕೈಫ್ ಸೇರಿದಂತೆ ಹಲವು ತಾರಾ ಆಟಗಾರರು ಪಾಲ್ಹೊಂಡಿದ್ದಾರೆ.

ಕ್ರೀಡಾಂಗಣ ಉದ್ಘಾಟನೆ ವೇಳೆ ಸದ್ಗುರು ಮಧುಸೂದನ್ ಸಾಯಿ, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್, ರಾಜ್ಯ ಸರ್ಕಾರ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಮತ್ತಿತರು ಇದ್ದು ಕೃಷ್ಣ ಕ್ರೀಡಾಂಗಣ ತುಂಬ ಸಾಯಿ ಭಕ್ತರು, ಕ್ರೀಡಾ ಪ್ರೇಮಿಗಳು ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next