Advertisement

ಹುಬ್ಬಳ್ಳಿ : ಗಣೇಶ ವಿಸರ್ಜನೆ ವೇಳೆ ಘರ್ಷಣೆ ; ಲಾಠಿ ಚಾರ್ಜ್‌ 

08:32 AM Sep 14, 2018 | |

ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯ ಮ್ಯಾಗನೀಸ್‌‌ ಫ್ಲ್ಯಾಟ್‌ ಬಳಿ ಗುರುವಾರ ತಡರಾತ್ರಿ ಗಣೇಶ ವಿಗ್ರಹ ವಿಸರ್ಜನೆ ನಡೆಯುವ ವೇಳೆ ಘರ್ಷಣೆ ನಡೆದಿದ್ದು , ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ್ದಾರೆ. 

Advertisement

ಯುವಕರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಗುಂಪು ಘರ್ಷಣೆಗೆ ತಿರುಗಿದೆ. ಪರಿಸ್ಥಿತಿ ಕೈ ಮೀರುವುದನ್ನು ಅರಿಯ ಪೊಲೀಸರು ಲಾಠಿ ಬೀಸುವ ಮೂಲಕ ಯುವಕರನ್ನು ಚದುರಿಸಿದ್ದಾರೆ. 

ಪೊಲೀಸರು ಲಾಠಿ ಬೀಸಿದ ಬಳಿಕ ಗಣೇಶ ವಿಸರ್ಜನಾ ಮೆರವಣಿಗೆ ಅರ್ಧಕ್ಕೆ ನಿಲ್ಲಿಸಿದ ಮಂಡಳಿಯವರು ರಸ್ತೆಯಲ್ಲಿ ಕುಳಿತು ಧರಣಿಯನ್ನು ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next