Advertisement

ಮಾನ್‌ ಮದ್ಯ ಆರೋಪ: ಪರಿಶೀಲನೆಗೆ ಸಿಂಧಿಯಾ ಸಜ್ಜು 

11:15 PM Sep 20, 2022 | Team Udayavani |

ಹೊಸದಿಲ್ಲಿ: ಮದ್ಯ ಸೇವಿಸಿದ್ದರು ಎಂಬ ಕಾರಣಕ್ಕೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ರನ್ನು ಫ್ರಾಂಕ್‌ಫ‌ರ್ಟ್‌ ಏರ್‌ಪೋರ್ಟ್‌ನಲ್ಲಿ ವಿಮಾನದಿಂದ ಕೆಳಗಿಳಿಸಿದರು ಎಂಬ ಶಿರೋಮಣಿ ಅಕಾಲಿ ದಳದ ಆರೋಪ ಕುರಿತಂತೆ ಪರಿಶೀಲಿ­ಸುವುದಾಗಿ ಕೇಂದ್ರ ವಿಮಾನ­ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮಂಗಳವಾರ ತಿಳಿಸಿದ್ದಾರೆ.

Advertisement

ಸಿಎಂ ಮಾನ್‌ ಮದ್ಯಪಾನ ಮಾಡಿದ್ದರಿಂದ ಅವರನ್ನು ದಿಲ್ಲಿಗೆ ಹೊರಡುತ್ತಿದ್ದ ವಿಮಾನದಿಂದ ಇಳಿಸಲಾಯಿತು. ಸಿಎಂ ಮಾನ್‌ ಅವರ ಇಂಥ ನಡವಳಿಕೆಯಿಂದ ಪಂಜಾಬ್‌ಗ ಅವಮಾನ­ವಾಗಿದೆ ಎಂದು ಸೋಮವಾರ ಅಕಾಲಿ ದಳದ ನಾಯಕ ಸುಖ್‌ಬೀರ್‌ ಸಿಂಗ್‌ ಬಾದಲ್‌ ಕಿಡಿಕಾರಿದ್ದರು. ಕಾಂಗ್ರೆಸ್‌ ಕೂಡ ಈ ಕುರಿತು ತನಿಖೆಗೆ ಆಗ್ರಹಿಸಿತ್ತು. ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿ­ರುವ ಸಚಿವ ಸಿಂಧಿಯಾ, “ಇದು ವಿದೇಶಿ ನೆಲದಲ್ಲಿ ಆಗಿರುವ ಘಟನೆ. ಆದರೆ, ಇದು ಸತ್ಯವೋ, ಸುಳ್ಳೋ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದಿದ್ದಾರೆ.

ಇನ್ನು, ಘಟನೆ ಬಗ್ಗೆ ಮಾತನಾಡಿರುವ ಆಪ್‌ ನಾಯಕ ಕೇಜ್ರಿವಾಲ್‌, “ಭಗವಂತ್‌ ಮಾನ್‌ ಅವರು ಮಾಡುತ್ತಿರುವ ಕೆಲಸದಲ್ಲಿ ಯಾವುದೇ ಲೋಪ ಸಿಗದ ಕಾರಣ, ಅವರ ಮುಖಕ್ಕೆ ಮಸಿ ಬಳಿಯಲು ವಿಪಕ್ಷಗಳು ಇಂಥ ಸುಳ್ಳು ಆರೋಪಗಳನ್ನು ಹಬ್ಬಿಸುತ್ತಿವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next