Advertisement

ಸಿಬಿಎಸ್‌ಇ ನಿಯಮದಿಂದ ನೀಟ್‌ ಅಭ್ಯರ್ಥಿಗಳಿಗೆ ಫ‌ಜೀತಿ

12:39 PM May 08, 2017 | Team Udayavani |

ಬೆಂಗಳೂರು: ಸೆಂಟ್ರಲ್‌ ಬೋರ್ಡ್‌ ಆಫ್ ಸೆಕೆಂಡರಿ ಎಜುಕೇಷನ್‌(ಸಿಬಿಎಸ್‌ಇ)ವತಿಯಿಂದ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಭಾನುವಾರ ನಡೆದ ನೀಟ್‌ ಪರೀಕ್ಷೆ ಸುಸೂತ್ರವಾಗಿ ನಡೆದರೂ, ಸಿಬಿಎಸ್‌ಇ ನಿಯಮ ಉಲ್ಲಂ ಸಿದ ಕೆಲವರಲ್ಲಿ ಗಲಿಬಿಲಿ ಸೃಷ್ಟಿಯಾಗಿದೆ. 

Advertisement

ನೀಟ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಭದ್ರತೆಯ ದೃಷ್ಟಿಯಿಂದ ಸಿಬಿಎಸ್‌ಇ ಈ ಹಿಂದೆಯೇ ಕೆಲವೊಂದು ಸ್ಪಷ್ಟ ಸೂಚನೆ ನೀಡಿತ್ತು. ಸೂಚನೆ ಪಾಲನೆ ಮಾಡಿದ ಅಭ್ಯರ್ಥಿಗಳಲ್ಲಿ  ಮುಜುಗರ ಅಥವಾ ಗೊಂದಲ ಇರಲಿಲ್ಲ. ನಿಯಮ ಉಲ್ಲಂ ಸಿದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಫ‌‌ಜೀತಿಗೆ ಒಳಗಾದರು.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಮೈಸೂರು ಸೇರಿದಂತೆ ದೇಶದ 104 ನಗರದ ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ ನೀಟ್‌ ಪರೀಕ್ಷೆಗೆ ಸಿಬಿಎಸ್‌ಇಯಿಂದಲೇ ಬಿಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಎಲ್ಲಾ ಅಭ್ಯರ್ಥಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. 

ಪರೀಕ್ಷೆ ಕೇಂದ್ರಕ್ಕೆ ಬಂದ ಹೆಣ್ಣುಮಕ್ಕಳ ಹೇರ್‌ಬ್ಯಾಂಡ್‌ ಹಾಗೂ ಹೇರ್‌ಪಿನ್‌ಗಳನ್ನು ಪ್ರವೇಶ ದ್ವಾರದಲ್ಲೇ ತೆಗೆಸಿ, ನಂತರ ಒಳಗೆ ಬಿಡಲಾಯಿತು. ಪರೀಕ್ಷೆ ಬರೆಯಲು ಅಗತ್ಯವಿರುವ ಪೆನ್‌ ಹೊರತುಪಡಿಸಿ, ಕ್ಯಾಲ್ಕುಲೇಟರ್‌, ಮೊಬೈಲ್‌, ಇಯರ್‌ಫೋನ್‌, ಮೈಕ್ರೋ ಫೋನ್‌ ಇತ್ಯಾದಿ ಯಾವ ಉಪಕರಣವನ್ನೂ ಪರೀಕ್ಷಾ ಕೇಂದ್ರ ಒಳಗೆ ಕೊಂಡೊಯ್ಯಲು ಅವಕಾಶವೇ ನೀಡಿಲ್ಲ.  

ಭಾನುವಾರ ಬೆಳಗ್ಗೆ 10 ಗಂಟೆಗೆ ಎಲ್ಲಾ ಕೇಂದ್ರದಲ್ಲೂ ನೀಟ್‌ ಆರಂಭವಾಗಿದೆ. ಪರೀಕ್ಷಾ ಪೂರ್ವದಲ್ಲೇ ನೀಡಿದ್ದ ಸೂಚನೆಯಂತೆ ಅರ್ಧಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಬಂದಿರಬೇಕು ಹಾಗೂ ಪರೀಕ್ಷೆ ಆರಂಭ‌ಕ್ಕೂ 10 ನಿಮಿಷ ಮೊದಲೇ ಪರೀಕ್ಷೆ ಬರೆಯುವ ಸೀಟಿನಲ್ಲಿ ಕುಳಿತಿರಬೇಕು ಎಂಬ ಸೂಚನೆಯನ್ನು ಸಿಬಿಎಸ್‌ಇ ನೀಡಿತ್ತು.

Advertisement

ಭಾನುವಾರ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಯಾವ ಅಭ್ಯರ್ಥಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಕೇವಲ 5 ರಿಂದ 10 ನಿಮಿಷ ತಡವಾಗಿ ಬಂದವರು ಕೂಡ ನೀಟ್‌ನಿಂದ ವಂಚಿತರಾಗಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು, ಬಸವನಗುಡಿ ಕಾಲೇಜು, ಬಿಜಿಎಸ್‌ ಸೇರಿದಂತೆ ರಾಜ್ಯದ ವಿವಿಧ ಭಾಗದ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಹೋದ ಸುಮಾರು 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ.

ಲೇಸ್‌ ಕಟ್ಟುವ ಶೂ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದಿರುವ ಅಭ್ಯರ್ಥಿಗಳ ಶೂ ಹಾಗೂ ಸಾಕ್ಸ್‌ ತೆಗೆಸಿ ಪರಿಶೀಲನೆ ಮಾಡಿದ್ದಾರೆ. ಹಾಗೆಯೇ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಭಾವಚಿತ್ರ ಹಾಗೂ ಸಹಿ ಸ್ಪಷ್ಟವಾಗಿ ಕಾಣದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಅಥವಾ ಸರ್ಕಾರ ನೀಡಿರುವ ಯಾವು ದಾದರೊಂದು ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕೊಂಡೊಯ್ಯುವಂತೆ ಸೂಚನೆ ನೀಡಿದ್ದರು.

ಇಂಥ ಸಂದರ್ಭದಲ್ಲಿ ಆಧಾರ್‌ ಅಥವಾ ಸರ್ಕಾರ ಸೂಚಿಸಿದ್ದ ಗುರುತಿನ ಚೀಟಿಯ  ಮೂಲ ಪ್ರತಿ ತೋರಿಸದ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ ಎಂದು ಮೂಗಳು ತಿಳಿಸಿವೆ. ದೇಶದ 104 ನಗರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿದ್ದು, 11,35,104 ಅಭ್ಯರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದರು. ನೀಟ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ರಾಷ್ಟ್ರ ಮಟ್ಟದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next