Advertisement

Citizenship Bill:ರಾಷ್ಟ್ರಪತಿ ಹೇಳಿಕೆಗೆ ವಿದ್ಯಾರ್ಥಿ ಸಂಘಟನೆ ವಿರೋಧ

10:57 AM Feb 01, 2019 | Team Udayavani |

ಇಂಫಾಲ : ನೆರೆ ಹೊರೆಯ ದೇಶಗಳಲ್ಲಿ ಧಾರ್ಮಿಕ ದಬ್ಟಾಳಿಕೆಯ ಬಲಿಪಶುಗಳಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದು ಆಸರೆ ಪಡೆದಿರುವ ಮುಸ್ಲಿಮೇತರ ಭಾರತ ಮೂಲದವರಿಗೆ 2016ರ ಪೌರತ್ವ ತಿದ್ದುಪಡಿ ಮಸೂದೆಯು ನೆರವಾಗಲಿದೆ ಎಂದು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಹೇಳಿರುವುದನ್ನು ಮಣಿಪುರ ಮೂರು ಪ್ರಮುಖ ವಿದ್ಯಾರ್ಥಿ ಸಂಘಟನೆಗಳು ಬಲವಾಗಿ ಖಂಡಿಸಿವೆ. 

Advertisement

ಪೌರತ್ವ ತಿದ್ದುಪಡಿ ಮಸೂದೆಯು ರಾಜ್ಯಸಭೆಯಲ್ಲಿ ಪಾಸಾಗುವುದನ್ನು ತಡೆಯುವ ನಿಟ್ಟಿನಲ್ಲಿ ಪ್ರಕೃತ ದಿಲ್ಲಿಯಲ್ಲೇ ಠಿಕಾಣಿ ಹೂಡಿರುವ ಮಣಿಪುರ ವಿದ್ಯಾರ್ಥಿ ಸಂಘಟನೆಗಳ ನಾಯಕರು ರಾಷ್ಟ್ರಪತಿ ಹೇಳಿಕೆಯನ್ನು ಬಲವಾಗಿ ವಿರೋಧಿಸಿದರು. 

ಒಂದೊಮ್ಮೆ ಪ್ರಸ್ತಾವಿತ ಮಸೂದೆಯು ರಾಜ್ಯಸಭೆಯಲ್ಲೂ ಪಾಸಾದರೆ ತಾವು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವೆವೆಂದು ಆಲ್‌ ಮಣಿಪುರ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಎಎಂಎಸ್‌ಯು), ಮಣಿಪುರ್‌ ಸ್ಟೂಡೆಂಟ್ಸ್‌ ಫೆಡರೇಶನ್‌ (ಎಂಎಸ್‌ಎಫ್) ಮತ್ತು ಡೆಮೋಕ್ರಾಟಿಕ್‌ ಸ್ಟೂಡೆಂಟ್ಸ್‌ ಅಲಾಯನ್ಸ್‌ ಆಫ್ ಮಣಿಪುರ್‌ (ಡಿಇಎಸ್‌ಎಎಂ) ಇಂದು ಶುಕ್ರವಾರ ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next