Advertisement

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಇಲ್ಲ

09:30 AM Mar 19, 2020 | Hari Prasad |

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಾವುದೇ ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂ ಸುವುದಿಲ್ಲ. ಅದನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮಂಗಳವಾರ ಸಲ್ಲಿಕೆ ಮಾಡಿರುವ 129 ಪುಟಗಳ ಪ್ರಾಥಮಿಕ ಹಂತದ ಅಫಿದವಿತ್‌ನಲ್ಲಿ ಹೇಳಿಕೊಂಡಿದೆ.

Advertisement

ರಾಜಸ್ಥಾನ ಸರಕಾರ ಮತ್ತು ಇತರ ಹಲವು ಸಂಘ-ಸಂಸ್ಥೆಗಳು, ವ್ಯಕ್ತಿಗಳು ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದವು. 2019ರ ಡಿ. 18ರಂದು ನಡೆದಿದ್ದ ವಿಚಾರಣೆ ವೇಳೆ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಲು ಕೋರ್ಟ್‌ ಒಪ್ಪಿಕೊಂಡಿತ್ತು.

ಪೌರತ್ವ ಕಾಯ್ದೆಯನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಿ ಅಂಗೀಕರಿಸಲಾಗಿದೆ. ಅದನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗದು. ಸಂವಿಧಾನದ 246ನೇ ವಿಧಿಯ ಅನ್ವಯ ಏಳನೇ ಷೆಡ್ನೂಲ್‌ನಲ್ಲಿ ಉಲ್ಲೇಖೀಸಿರುವಂತೆ ಕಾನೂನು ರೂಪಿಸುವ ಬಗ್ಗೆ ಚರ್ಚೆ ನಡೆಸಿ ಕಾಯ್ದೆ ರೂಪಿಸುವ ಪರಮಾಧಿಕಾರ ಸಂಸತ್‌ ಹೊಂದಿದೆ ಎಂದು ಅಫಿದವಿತ್‌ನಲ್ಲಿ ಉಲ್ಲೇಖೀಸಲಾಗಿದೆ.

ದೇಶದ ಯಾವುದೇ ಪೌರ ಸದ್ಯ ಹೊಂದಿರುವ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ಚ್ಯುತಿ ಬರುವುದಿಲ್ಲ. ದೇಶದ ಕಾನೂನಾತ್ಮಕ, ಪ್ರಜಾಸ ತ್ತಾತ್ಮಕ ಅಥವಾ ಜಾತ್ಯತೀತ ಹಕ್ಕುಗಳಿಗೆ ಧಕ್ಕೆ ಉಂಟಾಗುವುದಿಲ್ಲ. ಹೊಸ ಕಾಯ್ದೆಯ ಉದ್ದೇಶ ಪೌರತ್ವ ನೀಡುವುದೇ ಹೊರತು, ಸೆಳೆಯುವುದಲ್ಲ ಎಂದು ಸರಕಾರ ಸಮರ್ಥಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next