Advertisement

ಸಿನಿಮೀಯ ಚೇಸ್‌:ಬಾವಿಗೆ ಹಾರಿ ಕಳ್ಳರ ಹಿಡಿದ ಪೊಲೀಸ್‌!

02:55 PM Aug 17, 2017 | Team Udayavani |

ಧಾರಾವಾಡ: ಕಳ್ಳತನಕ್ಕೆ ಬಂದ ಇಬ್ಬರು ಖದೀಮರು ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾವಿಗೆ ಹಾರಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಸಿನಿಮೀಯ ರೀತಿಯಲ್ಲಿ ಪೊಲೀಸರೂ ಬಾವಿಗಿಳಿದು ಇಬ್ಬರನ್ನು ಬಂಧಿಸಿದ್ದಾರೆ.

Advertisement

ಮಹಿಷಿ ರಸ್ತೆಯಲ್ಲಿರುವ ರಶ್ಮಿ ಎನ್ನುವವರ ಮನೆಗೆ ರಾತ್ರಿ ಇಬ್ಬರು ಕಳ್ಳರು ನುಗ್ಗಿ ಮನೆಯ ಮೇಲಿದ್ದ ಸೋಲಾರ್‌ನ ತಾಮ್ರದ ತಂತಿಗಳನ್ನು ಕದಿಯಲು ಆರಂಭಿಸಿದ್ದಾರೆ. ಕಳ್ಳರ ಕೃತ್ಯ ಕಂಡು ಕೂಡಲೇ ರಶ್ಮಿ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. 

ಪೊಲೀಸರು ಬರುವುದನ್ನು ಗಮನಿಸಿದ ಇಬ್ಬರು ಕಳ್ಳರು ಬಾವಿಗೆ ಹಾರಿ ಅಡಗಿ ಕುಳಿತಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆಗಿಳಿದು ಬಾವಿಯಲ್ಲಿದ್ದ ಧಾರವಾಡದ ಲಕ್ಷ್ಮೀ ಸಿಂಗನಕೇರಿ ಬಡವಾಣೆಯ ಶಾನು ಮತ್ತು ವಾಸಿಮ್‌ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ. 

ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next