Advertisement

ಚಿತ್ರರಂಗದ ಚಟುವಟಿಕೆ ಸ್ಥಗಿತ

11:39 AM Nov 27, 2018 | Team Udayavani |

ಅಂಬರೀಶ್‌ ನಿಧನದ ಹಿನ್ನೆಲೆಯಲ್ಲಿ ಸೋಮವಾರವೂ ಕೆಲವು ಬಹುತೇಕ ಕಡೆ ಚಿತ್ರ ಪ್ರದರ್ಶನ ರದ್ದಾಗಿತ್ತು. ಭಾನುವಾರ ರಾಜ್ಯದೆಲ್ಲೆಡೆ ಚಿತ್ರಮಂದಿರಗಳು ಸ್ವ-ಇಚ್ಛೆಯಿಂದಲೇ ಪ್ರದರ್ಶನ ಹಾಗೂ ಸಿನಿಮಾ ಚಟುವಟಿಕೆಗಳನ್ನು ರದ್ದು  ಮಾಡುವ ಮೂಲಕ ಗೌರವ ಸಲ್ಲಿಸಿದ್ದವು.

Advertisement

ಸೋಮವಾರ ಕೂಡ ಯಾವುದೇ ಸಿನಿಮಾ ಚಟುವಟಿಕೆಗಳು ನಡೆಯಲಿಲ್ಲ. ಚಿತ್ರಮಂದಿರದ ಮಾಲೀಕರು ಸ್ವ-ಇಚ್ಛೆಯಿಂದಲೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವ ಮೂಲಕ ಅಂಬರೀಶ್‌ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಚಿತ್ರಪ್ರದರ್ಶನ ಸೇರಿದಂತೆ, ಡಬ್ಬಿಂಗ್‌, ಎಡಿಟಿಂಗ್‌, ಎಫೆಕ್ಟ್ಸ್ ಸೇರಿದಂತೆ ಇನ್ನಿತರೆ ಸಿನಿಮಾ ಕಾರ್ಯಗಳು ನಡೆಯಲಿಲ್ಲ.

ಅಂಬರೀಶ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಅನೇಕರು ತಮ್ಮ ಚಿತ್ರೀಕರಣವನ್ನು ನಡೆಸದೆ, ಚಿತ್ರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕೆಲಸಗಳನ್ನೂ ಮಾಡದೆ, ಅವರಿಗೆ ಗೌರವಿಸಲು ಕಂಠೀರವ ಸ್ಟುಡಿಯೋದತ್ತ ದಾಪುಗಾಲು ಇಟ್ಟಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next