Advertisement

ರಾಜೀವ್‌ ಅಪ್ರಬುದ್ಧ, ಇಂದಿರಾ ಉತ್ತರಾಧಿಕಾರತ್ವಕ್ಕೆ ಅನರ್ಹ: CIA ವರದಿ

03:33 PM Aug 09, 2017 | Team Udayavani |

ಹೊಸದಿಲ್ಲಿ : ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಸುಮಾರು ಎರಡು ವರ್ಷಗಳ ಮೊದಲೇ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಇಂದಿರಾ ಅವರ ಉತ್ತರಾಧಿಕಾರಿಯಾಗಲಿದ್ದ  ಆಕೆಯ ಪುತ್ರ ರಾಜೀವ್‌ ಗಾಂಧಿ “ರಾಜಕೀಯವಾಗಿ ಅಪ್ರಬುದ್ಧ” ಎಂದು ಹೇಳಿತ್ತಲ್ಲದೆ, “ಒಂದೊಮ್ಮೆ ಇಂದಿರಾ ಗಾಂಧಿ ಆಕಸ್ಮಿಕವಾಗಿ ನಿಧನ ಹೊಂದಿದರೆ ರಾಜೀವ್‌ ಗಾಂಧಿ ಆಕೆಯ ಉತ್ತರಾಧಿಕಾರಿ ಆಗಲಾರ” ಎಂದೇ ಹೇಳಿತ್ತು.

Advertisement

“ರಾಜೀವ್‌ ಗಾಂಧಿ ತನ್ನ ಪಕ್ಷವನ್ನಾಗಲೀ, ದೇಶದ ಜನರನ್ನಾಗಲೀ, ಹುರಿದುಂಬಿಸುವಲ್ಲಿ ವಿಫ‌ಲನಾಗಿದ್ದ’ ಎಂದು ಕೂಡ ಸಿಐಎ ಹೇಳಿತ್ತು. 

ಅಮೆರಿಕದ ಸಿಐಎ ಬಹಿರಂಗಪಡಿಸಿರುವ ರಹಸ್ಯ ವರದಿಯನ್ನು ಉಲ್ಲೇಖೀಸಿ ಪಿಟಿಐ ಈ ವಿಷಯಗಳನ್ನು ಬಹಿರಂಗಪಡಿಸಿದೆ.  1983ರ ಜನವರಿ 14ರ ದಿನಾಂಕವನ್ನು ಹೊಂದಿರುವ ಸಿಐಎ ವರದಿಯು  “ಒಂದೊಮ್ಮೆ ಇಂದಿರಾ ಆಕಸ್ಮಿಕವಾಗಿ ನಿಧನಹೊಂದಿದಲ್ಲಿ ಮತ್ತು ಪಕ್ಷದ ಉತ್ತರಾಧಿಕಾರತ್ವದ ಹೊಣೆಯನ್ನು ಆಕೆಯ ಪುತ್ರ ರಾಜೀವ್‌ ಗಾಂಧಿ ವಹಿಸಿಕೊಂಡಲ್ಲಿ ಕಾಂಗ್ರೆಸ್‌ ಪಕ್ಷ ದುರ್ಬಲವಾಗುತ್ತದೆ” ಎಂದು ಹೇಳಿತ್ತು.

1984ರಲ್ಲಿ ಅಕ್ಟೋಬರ್‌ನಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದಾಗ, ಸಿಐಎ ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ, ರಾಜೀವ್‌ ಗಾಂಧಿಯೇ ಪ್ರಧಾನಿಯಾದರು ಮತ್ತು ಕೆಲವೇ ತಿಂಗಳಲ್ಲಿ ಅನುಕಂಪದ ಅಲೆಯಲ್ಲಿ ಅಭೂತಪೂರ್ವ ಜನಾದೇಶದೊಂದಿಗೆ ಮರು ಆಯ್ಕೆಯಾದರು.

ಭಾರತದಲ್ಲಿರುವ ಮಾಹಿತಿ ಹಕ್ಕು ಕಾಯಿದೆಯ ರೀತಿಯಲ್ಲೇ ಅಮೆರಿಕದಲ್ಲಿರುವ ಮಾಹಿತಿ ಹಕ್ಕು ಸ್ವಾತಂತ್ರ್ಯ ಕಾಯಿದೆಯಡಿ ಸಿಐಎ “1980ರ ದಶಕದ ಮಧ್ಯಭಾಗದ ಭಾರತ; ಗುರಿಗಳು ಮತ್ತು ಸವಾಲುಗಳು’ ಎಂಬ ಸಂಕ್ಷಿಪ್ತ ವರದಿಯನ್ನು ಸಿಐಎ ಬಿಡುಗಡೆ ಮಾಡಿದೆ. ಈ ವರದಿಯು ಸುಮಾರು 30 ಪುಟಗಳಷ್ಟಿದೆ. 

Advertisement

ಈ ವರದಿಯಲ್ಲಿ ಸಿಐಎ 1980ರ ದಶಕದ ಮಧ್ಯದ ಭಾರತದ ಭವಿಷ್ಯವನ್ನು ಚರ್ಚಿಸಲಾಗಿದೆಯಲ್ಲದೆ ಅನೇಕ ಬಗೆಯ ರಾಜಕೀಯ ಸನ್ನಿವೇಶಗಳನ್ನು ಅವಲೋಕಿಸಿದೆ. 1985ರ ಮಹಾ ಚುನಾವಣೆಯಲ್ಲಿ ಕ್ಷೀಣ ಬಹುತಮದೊಂದಿಗೆ ಇಂದಿರಾ ಗಾಂಧಿಯವರ ಪುನರಾಯ್ಕೆಯ ಸಂಭಾವ್ಯತೆ ಮತ್ತು ಒಂದೊಮ್ಮೆ ಆಕೆಯ ಆಕಸ್ಮಿಕ ಸಾವು ಸಂಭವಿಸಿದಲ್ಲಿ ದೇಶದಲ್ಲಿ ಏನೇನಾದೀತು ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಿದೆ. 

ಇಂದಿರಾ ಗಾಂಧಿಯವರ ಬಳಿಕ ಒಂದೊಮ್ಮೆ ರಾಜೀವ್‌ ಗಾಂಧಿ ಅಲ್ಲದಿದ್ದರೆ ಸಂಪುಟ ಮಟ್ಟದ ರಾಜಕೀಯ ಮುತ್ಸದ್ದಿಗಳಾಗಿರುವ ರಕ್ಷಣಾ ಸಚಿವ ಆರ್‌ ವೆಂಕಟರಾಮನ್‌, ವಿದೇಶ ಸಚಿವ ಪಿ ವಿ ನರಸಿಂಹ ರಾವ್‌, ಹಣಕಾಸು ಸಚಿವ ಪ್ರಣವ್‌ ಮುಖರ್ಜಿ ಮತ್ತು ಕೈಗಾರಿಕಾ ಸಚಿವ ಎನ್‌ ಡಿ ತಿವಾರಿ ಅವರ ಪ್ರಧಾನಿಯಾಗುವ ಸಂಭಾವ್ಯತೆಯನ್ನೂ ಸಿಐಎ ತನ್ನ ವರದಿಯಲ್ಲಿ ಚರ್ಚಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next