Advertisement

Chittapur ಕಾಡು ಹಂದಿ ಬೇಟೆ: ಇಬ್ಬರ ಬಂಧನ

07:02 PM Jun 23, 2024 | Team Udayavani |

ಚಿತ್ತಾಪುರ: ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

Advertisement

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನವರು ಎನ್ನಲಾದ ಸೋಮೇಶ್ ಮತ್ತು ಅಂಬರೀಶ್ ಎಂಬುವವರು ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಬೂಳ್ ಗ್ರಾಮದ ಹತ್ತಿರ ಕಾಡು ಹಂದಿಯ ಭೇಟೆಯಾಡಿ ಬೊಲೆರೊ ವಾಹನದಲ್ಲಿ ರಾಯಚೂರು ಕಡೆಗೆ ತೆಗೆದುಕೊಂಡು ಹೋಗುತ್ತಿರುವಾಗ ಕರ್ತವ್ಯ ನಿರತರಾಗಿದ್ದ ಬೀಟ್ ಪೊಲೀಸರು ತಪಾಸಣೆ ನಡೆಸಿದರು. ನಂತರ ಇಬ್ಬರು ಆರೋಪಿಗಳನ್ನು ಠಾಣೆಗೆ ಕರೆತಂದಾಗ ಪಿಎಸ್’ಐ ಶ್ರೀಶೈಲ್ ಅಂಬಾಟಿ ಅವರು ವಿಚಾರಣೆ ನಡೆಸಿ, ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಅರಣ್ಯ ಇಲಾಖೆಯ ಡಿಸಿಎಫ್ ಸುಮಿತ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಎಂ.ಡಿ ಮುನೀರ್ ಅಹಮದ, ಆರ್‌ಎಫ್‌ಒ ವಿಜಯಕುಮಾರ್ ಅವರು ಕಾರ್ಯಾಚರಣೆ ನಡೆಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೆಎಂಎಫ್‌ಸಿ ನ್ಯಾಯಾಧೀಶರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಆರ್‌ಎಫ್‌ಒ ಅನಿಲಕುಮಾರ, ಮಂಜುನಾಥ ಹಂದ್ರಾಳ್, ಸಂತೋಷ ಟೆಂಗಳಿ, ಜಟ್ಟೆಪ್ಪ ನಾವಿ, ಪೀರಪ್ಪ ಕತ್ತಿ, ಬೀಟ್ ಫಾರೆಸ್ಟರ್ ರಮೇಶ ಹಾದಿಮನಿ, ಚಂದ್ರಕಾಂತ್, ಜಾಫರ್, ಮಲ್ಲಪ್ಪ, ಮಹದೇವ ಸೇರಿದಂತೆ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next