Advertisement

ವೇದಾಂತ ಮೈನಿಂಗ್‌ ಕಂಪನಿಯಿಂದ 3400 ಆಹಾರ ಕಿಟ್‌ ಹಸ್ತಾಂತರ

03:07 PM Apr 19, 2020 | Naveen |

ಚಿತ್ರದುರ್ಗ: ಸಾಂಕ್ರಾಮಿಕ ರೋಗದ ಕಾರಣಕ್ಕೆ ನಾಡು ಸಂಕಷ್ಟದಲ್ಲಿರುವುದರಿಂದ ವೇದಾಂತ ಲಿಮಿಟೆಡ್‌- ಕಬ್ಬಿಣದ ಅದಿರು ಕಂಪನಿ ವತಿಯಿಂದ 3400 ಆಹಾರ ಕಿಟ್‌ ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

Advertisement

ಸಾಂಕ್ರಾಮಿಕ ರೋಗದಿಂದ ತೀವ್ರ ಪರಿಣಾಮ ಎದುರಿಸುತ್ತಿರುವ ಬಡವರಿಗೆ, ನಿರ್ಗತಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಒಂದು ತಂಡವನ್ನು ರಚಿಸಿದೆ. ಕೊರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದು, ಇದರಿಂದ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ವೇದಾಂತ ಸಂಸ್ಥೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದು ಈಗಾಗಲೇ ಮೆಡಿಕಲ್‌ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಈಗ 3400 ಆಹಾರ ಕಿಟ್‌ ನೀಡಲಾಗಿದೆ. ನಾಗರಿಕರು ಈ ಸೌಲಭ್ಯ ಬಳಸಿಕೊಳ್ಳಬೇಕು. ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಂಪನಿಯ ವ್ಯಾವಹಾರಿಕ ನಿರ್ದೇಶಕ ಕೃಷ್ಣಾರೆಡ್ಡಿ ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next