Advertisement

ವೈದ್ಯರು-ಪೊಲೀಸರು, ಸೈನಿಕರಿಗೆ ಸಹಕಾರ ನೀಡಿ

06:25 PM Apr 07, 2020 | Naveen |

ಚಿತ್ರದುರ್ಗ: ದೇಶಕ್ಕೆ ಕೋವಿಡ್‌ ಮಹಾಮಾರಿ ಬಂದಿದ್ದು, ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಪೊಲೀಸರು, ಸೈನಿಕರಿಗೆ ಬಿಜೆಪಿ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಜಿಲ್ಲಾಧ್ಯಕ್ಷ ಎ. ಮುರುಳಿ ತಿಳಿಸಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಬಿಜೆಪಿ 40ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶ ಸಂಕಟದಲ್ಲಿದೆ. ಎಲ್ಲರೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನ ಕೂಡಾ ಮನೆಯಲ್ಲಿ ಲಾಕ್‌ ಆಗಿದ್ದಾರೆ. ಈ ಕಾರಣಕ್ಕೆ ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ಸರಳ ವಾಗಿ ಮಾಡಲಾಗುತ್ತಿದೆ ಎಂದರು. ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್‌ ಮಾತನಾಡಿ ಜನಸಂಘ, ಭಾರತೀಯ ಜನತಾಪಾರ್ಟಿ ಹುಟ್ಟಿಕೊಂಡಿದ್ದೇ ಈ ದೇಶದ ಅನೇಕ ಸಮಸ್ಯೆಗಳನ್ನು ಪರಿಹರಿಸುವ ುದಕ್ಕಾಗಿ. ಸದ್ಯ ಇಡೀ ವಿಶ್ವವನ್ನೇ ತಲ್ಲಣಿಸಿರುವ ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಜ್ಜಾಗಿ ನಿಲ್ಲಬೇಕು ಎಂದರು.  ಸಿದ್ದೇಶ್‌ ಯಾದವ್‌, ಸುರೇಶ್‌ ಸಿದ್ದಾಪುರ, ಮಲ್ಲಿಕಾರ್ಜುನ್‌, ನಾಗರಾಜ್‌ ಬೇಂದ್ರೆ, ನಂದಿ ನಾಗರಾಜ್‌, ನಗರಾಧ್ಯಕ್ಷ ಶಶಿಧರ್‌, ವೆಂಕಟೇಶ್‌ ಯಾದವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next