Advertisement

ಶರಣರ ಸಮಾಜೋಧಾರ್ಮಿಕ ಕಾರ್ಯ ಅನನ್ಯ

06:43 PM Aug 11, 2021 | Team Udayavani |

ಹೊಸದುರ್ಗ : 12ನೇ ಶತಮಾನದಲ್ಲಿ ನಡೆದ ಸಮಾಜೋಧಾರ್ಮಿಕ ಪರಿವರ್ತನೆಯ ಕಾರ್ಯ 21ನೇ ಶತಮಾನದಲ್ಲೂ ಸಾಧ್ಯವಾಗಿಲ್ಲ. ಇಂದು ಮನುಷ್ಯ ಆಧುನಿಕ ತಂತ್ರಜ್ಞಾನಗಳಲ್ಲಿ ಸಾಕಷ್ಟು ಪ್ರಗತಿ ಸಾ ಧಿಸಿದ್ದರೂ ಮನುಷ್ಯನಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿದಿಲ್ಲ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಹತ್ತನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಆಧುನಿಕ ಉಪಕರಣಗಳಿಂದಾಗಿ ಪ್ರತಿ ಮನೆಯ ಗೋಡೆಗೂ ಕಿವಿ, ಕಣ್ಣು, ಮೂಗು ಬಂದು ಬಿಟ್ಟಿದೆ. ಒಬ್ಬರು ಮತ್ತೂಬ್ಬರನ್ನು ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ. ಶರಣರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿದ್ದರು. ಅವರು ಬುದ್ಧಿಯ ಬದಲು ಹೃದಯದಿಂದ ಮಾತನಾಡುತ್ತಿದ್ದರು.

ಆದರ್ಶಕ್ಕೆ ಬದ್ಧರಾಗಿದ್ದರು. ಜಾತಿ, ಲಿಂಗ, ಅಂತಸ್ತು, ಅಧಿಕಾರಗಳನ್ನು ಮೀರಿ ಒಂದಾಗುತ್ತಿದ್ದರು. ಆದರೆ ನಾಗರಿಕತೆ ಬೆಳೆದಂತೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಜಾತಿ, ಲಿಂಗ, ಅಂತಸ್ತು, ಅ ಧಿಕಾರವೇ ಮಾನವೀಯತೆಗೆ ಬೇಲಿಯಾಗಿವೆ. ಒಳ-ಹೊರಗೆ ಒಂದಾಗಿಲ್ಲ. ಆದರ್ಶಗಳು ಉಪದೇಶಕ್ಕೆ ಸೀಮಿತವಾಗಿವೆ. ಕೃತಕತೆ ಮೇರೆ ಮೀರಿ ಸ್ವಾರ್ಥಕ್ಕೆ ಅನುಗುಣವಾಗಿ ಬದಲಾಗುತ್ತಿರುವುದು ವಿಷಾದನೀಯ.

ಶರಣರಂತೆ ನಾವೂ ಪ್ರೀತಿ, ವಿಶ್ವಾಸ, ಮಾನವೀಯ ಜೀವನ ಸಾಗಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಬಂಡಾಯ ಪ್ರಜ್ಞೆಯುಳ್ಳ ಮಾದಾರ ಧೂಳಯ್ಯನವರದು ಚಪ್ಪಲಿ ಹೊಲೆಯುವ ಕಾಯಕ. ಅವರ ಕಾಯಕದ ಪರಿಭಾಷೆಯ ನೆಲೆಯಲ್ಲಿಯೇ ಅವರ ವಚನಗಳಿವೆ. ಚಪ್ಪಲಿ ಹೊಲೆಯುವ ಕಾಯದಲ್ಲಿ ತುಂಬ ಗೌರವವಿತ್ತು. ಈ ಕಾಯಕಕ್ಕೆ ಅಡ್ಡಿಪಡಿಸುವ ಪರಮೇಶ್ವರನನ್ನೇ “ಕಾಮ ಧೂಮ ಧೂಳೇಶ್ವರದಿಂದ ನೀನೇ ಬದುಕು’ ಎನ್ನುವ ಅವರ ಧೈರ್ಯ ಕಾಯಕಶೀಲರಿಗೆ ಮಾತ್ರ ಬರಲು ಸಾಧ್ಯ. ನಾವಿಂದು ದೇವರ ದರ್ಶನಕ್ಕೆ ಕಾಲ, ಕಾಸು, ಕಾಯಕವನ್ನು ವ್ಯಯ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಮಾದಾರ ಧೂಳಯ್ಯ’ ವಿಷಯ ಕುರಿತಂತೆ ಗಂಗಾವತಿ ತಾಲೂಕು ಮಲ್ಲಾಪುರದ ವೈದ್ಯಾಧಿ ಕಾರಿ ಡಾ| ರಾಜಶೇಖರ ನಾರನಾಳ ಮಾತನಾಡಿ, ಶ್ರಮಿಕ ವರ್ಗದ ಕಾಯಕ ಜೀವಿಗಳೇ ಕಲ್ಯಾಣ ಕ್ರಾಂತಿಯ ಜೀವಾಳ. ವಿದ್ಯೆ ಕೆಲವರ ಗುತ್ತಿಗೆಯಾಗಿದ್ದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ ಕಲಿತದ್ದು ಪವಾಡವೇ ಸರಿ. ಅನುಭವ ಮಂಟಪದ 770 ಅಮರಗಣಗಂಳಲ್ಲಿ ಶ್ರಮಿಕರೇ ಹೆಚ್ಚು. ಅವರು ಒಳ-ಹೊರಗಿನ ಹಂಗಿಲ್ಲದೆ ಸ್ಪಶ್ಯ-ಅಸ್ಪಶತೆಯ ಭೇದವಿಲ್ಲದೆ ಬಾಳಿ ಬದುಕಿದವರು ಎಂದರು.

Advertisement

ಮಾದಾರ ಧೂಳಯ್ಯನವರದು ಚರ್ಮ ಹದ ಮಾಡಿ ಚಪ್ಪಲಿ ಮಾಡುವ ಕಾಯಕ. ಈ ಕಾಯದಲ್ಲಿ ಶರಣತ್ವ ಪಡೆದ ನಿಜ ಶರಣ. ಈ ವೈಚಾರಿಕ, ವೈಜ್ಞಾನಿಕ ನಿಜಶರಣನ ಜೀವನದ, ಕೌಟುಂಬಿಕ ಹಿನ್ನೆಲೆಯ ದಾಖಲೆಗಳು ಸಿಗದಿರುವುದು ದುರದೃಷ್ಟಕರ ಸಂಗತಿ. ಷಡಕ್ಷರಿ ಪಂಡಿತನ “ಅಂಗೋದಕ ಮಹಿಮೆ’ ಎನ್ನುವ ಕೃತಿಯಲ್ಲಿ ಮಾದಾರ ಧೂಳಯ್ಯ ಸ್ನಾನ ಮಾಡಿದ ನೀರಿನಿಂದ ವಿವಿಧ ರೀತಿಯ ಚರ್ಮರೋಗಗಳಿಂದ ಬಳಲುತ್ತಿದ್ದ 300 ಜನ ಬ್ರಾಹ್ಮಣರು ಗುಣವಾದ ಪವಾಡದ ಮಾಹಿತಿ ಬರುತ್ತದೆ. ಇಂಥ ಪವಾಡಗಳಿಗೆ ಹೊರತಾದ ದಾಖಲೆಗಳ ಸಂಶೋಧನೆ ಅವಶ್ಯಕ ಎಂದು ತಿಳಿಸಿದರು.

ಯಳ್ಳಂಬೆಳಸೆಯ ದಿವ್ಯ ವೈ.ವಿ. ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್‌. ಎಸ್‌. ನಾಗರಾಜ್‌ ವಚನಗೀತೆ ಪ್ರಸ್ತುತಪಡಿಸಿದರು. ಶರಣ್‌ ತಬಲಾ ಸಾಥ್‌ ನೀಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next