Advertisement

ಚಿರು ಹೊಸ ಚಿತ್ರ “ರಾಜ ಮಾರ್ತಾಂಡ’

03:24 PM Aug 18, 2017 | |

“ಸಂಹಾರ’ ಚಿತ್ರದ ಕೆಲಸಗಳು ಬಹುತೇಕ ಮುಗಿದಿವೆ. ಚೈತನ್ಯ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ಮಧ್ಯೆ ಚಿರಂಜೀವಿ ಸರ್ಜಾ ಅಲಿಯಾಸ್‌ ಚಿರು ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಹೆಸರೇನು ಗೊತ್ತಾ? “ರಾಜ ಮಾರ್ತಾಂಡ’ ಅಂತ.

Advertisement

“ರಾಜ ಮಾರ್ತಾಂಡ’ ಚಿತ್ರವನ್ನು ಬರೆದು, ನಿರ್ದೇಶಿಸಿರುವುದು ರಾಮ್‌ನಾರಾಯಣ್‌. ವಿನೋದ್‌ ಪ್ರಭಾಕರ್‌ ಅಭಿನಯದ “ಕ್ರ್ಯಾಕ್‌’ ಎಂಬ ಚಿತ್ರವನ್ನು ಮುಗಿಸಿ, ಬಿಡುಗಡೆಗೆ ಕಾದಿರುವ ರಾಮ್‌ನಾರಾಯಣ್‌, ಶ್ರೀನಗರ ಕಿಟ್ಟಿ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಚಿರುಗೆ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ರಾಮ್‌ನಾರಾಯಣ್‌.

ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರವಾಗಿದ್ದು, ಕಥೆ-ಚಿತ್ರಕಥೆ-ಸಂಭಾಷಣೆಯನ್ನು ರಾಮ್‌ನಾರಾಯಣ್‌ ಅವರೇ ಬರೆದಿದ್ದಾರೆ. ಇದು ಅವರ ಐದನೆಯ ಚಿತ್ರವಾಗಲಿದೆ. ಈ ಚಿತ್ರವನ್ನು ಮಾದೇಶ್ವರ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ದಿವ್ಯ, ಸಾಯಿಸೂರ್ಯ, ಪ್ರಣವ್‌, ಪುನೀತ್‌ ಗೌಡ ಮುಂತಾದವರು ನಿರ್ಮಿಸುತ್ತಿದ್ದಾರೆ.

“ಕ್ರ್ಯಾಕ್‌’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡುವ ಸಾಧ್ಯತೆ ಇದೆ. “ರಾಜ ಮಾರ್ತಾಂಡ’ ಎಂಬ ಟೈಟಲ್‌ ಕಥೆಗಾರ ಅಜಯ್‌ ಕುಮಾರ್‌ ಅವರ ಬಳಿ ಇತ್ತಂತೆ. ಅವರು ಈಗ ಚಿತ್ರದ ಹೆಸರನ್ನು ರಾಮ್‌ನಾರಾಯಣ್‌ ಮತ್ತು ಚಿರುಗೆ ಬಿಟ್ಟುಕೊಡುವುದಕ್ಕೆ ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next