Advertisement

ಚಿಂತಾಮಣಿ: ಅಕ್ರಮ ಮದ್ಯ ನಾಶ

11:42 AM Jul 16, 2020 | mahesh |

ಚಿಂತಾಮಣಿ: ಅಕ್ರಮ ಮದ್ಯ ಮಾರಾಟ ಕಾನೂನು ಉಲ್ಲಂಘನೆ ಎಂದು ಅಬಕಾರಿ ಇಲಾಖೆ ನಿರೀಕ್ಷಕರಾದ ಎಂ.ಡಿ. ಮೋಹನ್‌ ಕುಮಾರ್‌ ತಿಳಿಸಿದರು. ಅಕ್ರಮ ಮದ್ಯ ಮಾರಾಟ ಹಿನ್ನೆಲೆಯಲ್ಲಿ ಜಪ್ತಿ ಮಾಡಿದ್ದ ವಿವಿಧ ಬ್ರ್ಯಾಂಡ್‌ ನ ಮದ್ಯವನ್ನು ಅಬಕಾರಿ ಉಪ ಅಧೀಕ್ಷಕ ವಿಶ್ವನಾಥ್‌ಬಾಬು ಅವರ ಸೂಚನೆ ಮೇರೆಗೆ ತಾಲೂಕಿನ ಅಂಬಾಜಿದುರ್ಗ ಹೋಬಳಿ ಕೋನಪಲ್ಲಿ ಗ್ರಾಮದ ದಕ್ಷಿಣದ ದಿಕ್ಕಿನ ಸರ್ಕಾರಿ ಖರಾಬು ಜಮೀನಿನಲ್ಲಿ ಮದ್ಯ ನಾಶಪಡಿಸಿ ಮಾತನಾಡಿದರು.
ನಗರ-ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಿಲ್ಲಬೇಕೆಂದು ತಿಳಿಸಿದರು.

Advertisement

ಚಿಂತಾಮಣಿ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರಾದ ವಿಶ್ವನಾಥ ಬಾಬು, ಚಿಂತಾಮಣಿ ವಲಯ ಅಬಕಾರಿ ನಿರೀಕ್ಷಕರಾದ ಎಂ.ಡಿ.ಮೋಹನ್‌ ಕುಮಾರ್‌,  ಕಂದಾಯ ಇಲಾಖಾ ಅಧಿಕಾರಿ ಗುರುಪ್ರಸಾದ್‌, ವ್ಯವಸ್ಥಾಪಕ ದಿನೇಶ್‌, ಕೆಎಸ್‌ಬಿಸಿಎಲ್‌ ಡಿಪೋ ಚಿಕ್ಕಬಳ್ಳಾಪುರ, ಚಿಂತಾಮಣಿ ಸಿಬ್ಬಂದಿ ಸುಮನ್‌, ವಿಠಲ್‌, ಮಹೇಶ್‌, ಕೌಶಿಕ್‌, ದೇವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next