Advertisement

ಚಿಣ್ಣರ ಬಿಂಬ ಮುಂಬಯಿ ಪೇಜಾವರ ಶಿಬಿರ:ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ

11:36 AM Oct 12, 2018 | Team Udayavani |

ಮುಂಬಯಿ: ಚಿಣ್ಣರ ಬಿಂಬ ಪೇಜಾವರ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯು ಸೆ. 30 ರಂದು ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ನಡೆಯಿತು.

Advertisement

ಪ್ರತಿಭಾ ಸ್ಪರ್ಧೆಯನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಪೇಜಾವರ ಮಠದ ಮುಖ್ಯ ಪ್ರಬಂಧಕ ರಾಮದಾಸ್‌ ಉಪಾಧ್ಯಾಯ ಅವರು, ಮಕ್ಕಳ ಭಜನೆ ಮತ್ತು ವಿಶೇಷವಾಗಿ ಶ್ಲೋಕ ಪಠಣೆಯನ್ನು ನಿರರ್ಗಳವಾಗಿ ಹೇಳುವುದನ್ನು ಕಂಡು ಆಶ್ಚರ್ಯಚಕಿತನಾದೆ. ಈ ಸಂಸ್ಥೆ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿದೆ. ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು, ಅದರ ಬದಲಿಗೆ ತಮ್ಮ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತಿರುವ ಚಿಣ್ಣರ ಬಿಂಬದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದರ ಬಗ್ಗೆ ಹೆತ್ತವರು ಮಕ್ಕಳನ್ನು ಪ್ರೇರೇಪಿಸಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಇಂತಹ ಸಂಸ್ಕಾರಯುತ ಜೀವನವನ್ನು ಕಲಿಸಿಕೊಟ್ಟಾಗ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಮೋದಾ ಶಿವಣ್ಣ ಶೆಟ್ಟಿ ಅವರು, ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡದಲ್ಲಿ ಇಷ್ಟೊಂದು ನಿರರ್ಗಳವಾಗಿ ಮಾತನಾಡುವುದನ್ನು ಕಂಡು ಬೆರಗಾದೆ. ನಾನು ಎಷ್ಟೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಮೈಕ್‌ ಹಿಡಿದು ಮಾತನಾಡಿದವಳಲ್ಲ. ಇಂದು ಈ ಮಕ್ಕಳ ಉತ್ಸಾಹವನ್ನು ಕಂಡು ಎರಡು ಮಾತನಾಡದೆ ಹೋದರೆ ತಪ್ಪಾದೀತು. ನನ್ನ ಬಾಲ್ಯದಲ್ಲಿ ಇಂತಹ ಅವಕಾಶ ದೊರೆಯುತ್ತಿದ್ದರೆ ಚೆನ್ನಾಗಿರುತ್ತಿತ್ತು. ಕಾರ್ಯಕ್ರಮವನ್ನು ಕಂಡು ಬಹಳಷ್ಟು ಸಂತೋಷವಾಯಿತು ಎಂದು ಅವರು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ನಮ್ಮ ಸಂಸ್ಥೆಯು ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿರುವುದನ್ನು ಕಂಡಾಗ ಸಂತೋಷವಾಗುತ್ತಿದೆ. ಈ 27 ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ನಿಮ್ಮೆಲ್ಲರ ಪ್ರೋತ್ಸಾಹವೇ ಈ ಯಶಸ್ಸಿಗೆ ಕಾರಣವಾಗಿದೆ. ನಿಮ್ಮೆಲ್ಲರ ಸಹಕಾರ ಸದಾ ಹೀಗೆಯೇ ಇರಲಿ. ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ವನಿತಾ ನೋಂಡಾ ಅವರು ಮಾತನಾಡಿ, ಪ್ರಸ್ತುತ ಬಂಟರ ಸಂಘ ಅಂಧೇರಿ- ಬಾಂದ್ರಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ, ಸಾಂತಾ ಕ್ರೂಜ್‌ ಕನ್ನಡ ಸಂಘದ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆಯಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರೆ ಅದಕ್ಕೆ ಚಿಣ್ಣರ ಬಿಂಬ ಕಾರಣವಾಗಿದೆ. ನನ್ನೆಲ್ಲಾ ಶ್ರೇಯಸನ್ನು ಚಿಣ್ಣರ ಬಿಂಬಕ್ಕೆ ಅರ್ಪಿಸಲು ಹೆಮ್ಮೆಯಾಗುತ್ತಿದೆ ಎಂದು ನುಡಿದು ಶುಭಹಾರೈಸಿದರು.

Advertisement

ವೇದಿಕೆಯಲ್ಲಿ ಜಗದೀಶ್‌ ರಾವ್‌, ರಮೇಶ್‌ ರೈ, ರೇಣುಕಾ ಪ್ರಕಾಶ್‌ ಭಂಡಾರಿ, ವಿಜಯ ಕೋಟ್ಯಾನ್‌, ಶಿಬಿರದ ಮುಖ್ಯಸ್ಥೆ ಅಶ್ವಿ‌ನಿ ಶಶಿಧರ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸುನೀತಾ ಸಂತೋಷ್‌ ಶೆಟ್ಟಿ, ಭಜನೆ ಶಿಕ್ಷಕಿ ಸುಚಿತ್ರಾ ಶೆಟ್ಟಿ ಉಪಸ್ಥಿತರಿದ್ದರು. 

ಮಕ್ಕಳಿಗೆ ಭಜನೆ, ಶ್ಲೋಕ ಪಠಣೆ, ಭಾವಗೀತೆ, ಜಾನಪದ ಗೀತೆ, ಭಾಷಣ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತೀರ್ಪುಗಾರರಾಗಿ ಉಮೇಶ್‌ ಜೋಯ್ಸ ಮತ್ತು ಅರುಣ್‌ ಜಿ. ದಾಸಪ್ಪ ಅವರು ಸಹಕರಿಸಿದರು. ಸ್ನಿಗಾœ ಶೆಟ್ಟಿ, ಜ್ಯೋತಿ ಸುಂಕದ ಹಾಗೂ ಶ್ರೇಯಾ ಶೆಟ್ಟಿಗಾರ್‌ ಪ್ರಾರ್ಥನೆಗೈದರು. ಅತಿಥಿ-ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇರಾದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.

ಪವಿತ್ರಾ ದೇವಾಡಿಗ, ಸುಸಮ್ಯಾ ರಾವ್‌, ಗಗನ್‌ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಜೀವನ್‌ ಗೌಡ, ಪ್ರಣವ್‌ ಕುಲಾಲ್‌, ವಿಘ್ನೇಶ್‌ ಪೂಜಾರಿ ಅತಿಥಿಗಳನ್ನು ಹಾಗೂ ತೀರ್ಪುಗಾರರನ್ನು ಪರಿಚಯಿಸಿದರು. ಕಾಂತಿ ಶೆಟ್ಟಿ, ಸರಳಾ ರಾವ್‌, ಪದ್ಮಿನಿ ಕುಂಟೂರು, ನಮಿತಾ ಆಚಾರ್ಯ, ಅಕ್ಷತಾ ಶೆಟ್ಟಿಗಾರ್‌ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುಮಿತ್ರಾ ದೇವಾಡಿಗ ವಂದಿಸಿದರು. ಮಕ್ಕಳು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next