Advertisement

ಚೀನಿ ವಸ್ತುಗಳನ್ನು ದಹಿಸಿ ಪ್ರತಿಭಟನೆ

07:10 AM Sep 02, 2017 | |

ಉಡುಪಿ: ಚೀನಾ ದೇಶವು ಉತ್ಪತ್ತಿ ಮಾಡಿದ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುವಂತೆ ಕರೆ ನೀಡಿದ್ದ ಬಜರಂಗದಳದ ಸದಸ್ಯರು ಸೆ. 1ರಂದು ಅಜ್ಜರಕಾಡಿನ ಹುತಾತ್ಮಕರ ಸ್ಮಾರಕದ ಬಳಿ ಚೀನಾ ನಿರ್ಮಿಸಿದ ವಸ್ತುಗಳನ್ನು ಸುಡುವುದರ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಬಜರಂಗದಳದ ವಿಭಾಗ ಸಂಚಾಲಕ ಸುನೀಲ್‌ ಕೆ.ಆರ್‌. ಮಾತನಾಡಿ ದೇಶದ ಮೇಲೆ ಆಕ್ರಮಣಕ್ಕೆ ಸಿದ್ಧತೆಯನ್ನು ಮಾಡಿದ್ದ ಚೀನಾ ದೇಶದ ವಸ್ತುಗಳನ್ನು ಭಾರತೀಯರು ಉಪಯೋಗಿಸದೆ ಪಾಠವನ್ನು ಕಲಿಸಬೇಕು. ಶೇ. 60 ರಷ್ಟು ವ್ಯಾಪಾರ ವಹಿವಾಟು ನಡೆಸುತ್ತಿರುವ ಚೀನಾಕ್ಕೆ ಇದರಿಂದ ಅತ್ಯುತ್ತಮ ಸಂದೇಶ ರವಾನೇಯಾಗುತ್ತದೆ. ಇದಕ್ಕೆ ಭಾರತೀಯರು ಸಹಕರಿಸಬೇಕೆಂದು ಕೋರಿದರು.

ಬಜರಂಗದಳದ  ಪ್ರಮುಖರಾದ ನಾರಾಯಣ ಮಣಿಯಾಣಿ, ದಿನೇಶ್‌ ಶೆಟ್ಟಿ ಹೆಬ್ರಿ, ಗಿರೀಶ್‌ ಕುಂದಾಪುರ, ಮಹೇಶ್‌, ದಿನೇಶ್‌ ಮೆಂಡನ್‌, ಸುರೇಂದ್ರ ಕೋಟೇಶ್ವರ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next