Advertisement

ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

11:47 AM Jul 10, 2020 | Naveen |

ಚಿಂಚೋಳಿ: ಡಾ| ಬಿ.ಆರ್‌. ಅಂಬೇಡ್ಕರವರು ವಾಸಿಸುತ್ತಿದ್ದ ನಿವಾಸವನ್ನು ಧ್ವಂಸಗೊಸಿರುವ ಕಿಡಿಗೇಡಿಗಳನ್ನು ಬಂಧಿಸಿ ಅವರನ್ನು ಗಡಿಪಾರು ಮಾಡಿ ಸೂಕ್ತ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ) ಮುಖಂಡರು ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ದಲಿತ ಮುಖಂಡರು ಮಾತನಾಡಿ, ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದ ಭಾರತದ ಕೋಟ್ಯಂತರ ಶೋಷಿತರಿಗೆ ಬೆಳಕನ್ನು ನೀಡಿದ್ದ ಅಂಬೇಡ್ಕರ್‌ ಅವರು ವಾಸಿಸುತ್ತಿದ್ದ ಮನೆಯ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು ಅವರಣದಲ್ಲಿ ಇರುವ ಸಾಮಾನುಗಳನ್ನು ಒಡೆದು ಹಾಕುವುದರ ಮೂಲಕ ಅವರ ವಿಕೃತ ಮನಃಸ್ಥಿತಿ ತೋರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಕೊಂಡು ಗಡಿಪಾರು ಮಾಡಬೇಕು. ಮುಂದೆ ಇಂತಹ ಹೀನ ಕೃತ್ಯ ನಡೆಯದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ವಿಭಾಗೀಯ ಸಂಚಾಲಕ ಗೋಪಾಲ ರಾಂಪೂರೆ, ತಾಲೂಕಾಧ್ಯಕ್ಷ ಶಶಿಕುಮಾರ ಮೇತ್ರಿ, ಸೋಮಶೇಖರ ಬೆಡಕಪಳ್ಳಿ, ಬಾಬುರಾವ್‌ ಬುಗಡಿ, ಶ್ರೀನಿವಾಸ ಕರಚಖೇಡ, ರಾಜು, ವಿಶಾಲ ಕಾನಿಸಿ, ಹಣಮಂತ ಕುಡಹಳ್ಳಿ, ಭೀಮಶಂಕರ ರಾಯಕೊಡ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next